i
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಮಾವೇಶ ಶೀಘ್ರ-ಮಾಜಿ ಡಿಸಿಎಂ ಪರಮೇಶ್ವರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭಾ ಚುನಾವಣೆ 6 ತಿಂಗಳಿರುವ ಸಂದರ್ಭದಲ್ಲಿ ರಾಜಕೀಯ ಪಪಕ್ಷಗಳ ವಿವಿಧ ಜಾತಿ, ಜನಾಂಗಗಳ ಸಮಾವೇಶ ಮಾಡಿ ಮತದಾರರನ್ನ ತನ್ನತ್ತ ಸೆಳೆಯುವುದು ವಾಡಿಕೆ. ಈಗ ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಮಾವೇಶ ನಡೆಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆಂದು ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಮಾವೇಶ ನಡೆಸಲು ಇದೇ 20ರಂದು ಪೂರ್ವಭಾವಿ ಸಭೆ ನಡೆಸಲಾಗುತ್ತದೆ, ಈಗಾಗಲೇ ಈ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಟ್ಟಿಗೆ ಶನಿವಾರ ಚರ್ಚಿಸಿದ್ದು ಶೀಘ್ರ ದಿನಾಂಕ ನಿರ್ಧರಿಸಲಾಗುತ್ತದೆ. ಸಮಾವೇಶ ಎಲ್ಲಿ ನಡೆಸಬೇಕು, ಸಮಾವೇಶಕ್ಕೆ ಯಾರನ್ನೆಲ್ಲ ಕರೆಯಬೇಕೆಂಬುದು ನ.20ರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.