i
ಭಾರತದ ಸಂವಿಧಾನ ವಕೀಲರ ಸ್ವರ್ಗಧಾಮ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತ ಸಂವಿಧಾನದ ಶಿಲ್ಪಿ ,ಭಾರತ ರತ್ನ , ಧೀನ ದಲಿತರ ನೆಚ್ಚಿನ ನಾಯಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರವರು ನೀಡಿದ ಸರ್ವ ಶ್ರೇಷ್ಠವಾದ ಕೊಡುಗೆ ಎಂದರೆ ಅಂದು ಭಾರತದ ಸಂವಿಧಾನ ಈ ಭಾರತದ ಸಂವಿಧಾನವು ಇಡಿ ಪ್ರಪಂಚದಲ್ಲಿಯೇ ಅತ್ಯಂತ ಸುದೀರ್ಘವಾದ ಮತ್ತು ವಿಸ್ತಾರವಾದ ಸಂವಿಧಾನವಾಗಿದೆ, ಇದು 292 ಸದಸ್ಯರನ್ನು ಒಳಗೊಂಡ ರಚನಾ ಮಂಡಳಿಯು ಈ ನಮ್ಮ ಸಂವಿಧಾನವನ್ನು ಸುಮಾರು 2 ವರ್ಷ 11 ತಿಂಗಳು 18 ದಿನಗಳ ನಂತರ 1948 ರಲ್ಲಿ ಕರಡು ಪ್ರತಿಯನ್ನು ಸಲ್ಲಿಸಿದ ನಂತರ 1949 ರ ನವೆಂಬರ್ 26 ರಂದು ಮಂಡಳಿಯ ಭಾರತ ಸಂವಿಧಾನಕ್ಕೆ ಅನುಮೋದನೆಯನ್ನು ನೀಡಿತು ಆಗ ಸಂವಿಧಾನದ ಮೂಲ ಪಠ್ಯವು 395 ವಿಧಿಗಳು, 22 ಬಾಗಗಳು ಮತ್ತು 8 ಅನುಸೂಚಿಗಳು ಒಳಗೊಂಡಿತ್ತು ಪ್ರಸ್ತುತ 104 ತಿದ್ದುಪಡಿಗಳ ಕಾರಣದಿಂದಾಗಿ 448 ವಿಧಿಗಳು, 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಹೊಂದಿದೆ.
ಇಂತಹ ವಿಶಾಲವಾದ ಸಂವಿಧಾನವನ್ನು ಹೊಂದಿದ ಭಾರತೀಯರಿಗೆ ಅದರಲ್ಲೂ ನ್ಯಾಯವಾದಿಗಳಿಗೆ ಇದು ಈ ಜನ್ಮದ ಪುಣ್ಯವೇ ಸರಿ. ನ್ಯಾಯವಾದಿಗಳಿಗೆ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಸಮಾಜದಲ್ಲಿ ನಡೆಯುವ ಅನ್ಯಾಯಗಳಿಗೆ ಅಥವಾ ಕಾನೂನುಬಾಹಿರ ಕೃತ್ಯಗಳಿಗೆ ನಾಂದಿ ಹಾಡಲು ನಮ್ಮ ಸಂವಿಧಾನ ಬಹಳ ಪೂರಕವಾಗಿದೆ.
ಅಲ್ಲದೆ ಪ್ರಸ್ತುತ ದಿನಗಳಲ್ಲಿ ಇನ್ನು ಸುಲಭವಾಗಿ ಎಲ್ಲಾ ಪ್ರಕರಣಗಳು ಮತ್ತು ಅದರ ಮಾಹಿತಿಯನ್ನು ಅಂತರ್ಜಾಲದ ಮೂಲಕವಾಗಿ ವಕೀಲರು ಕಷದಾರರು ಮತ್ತು ಎಲ್ಲರೂ ತಿಳಿಯುವಷ್ಟು ಬಹಳ ಮುಂಚೂಣಿಯಲ್ಲಿ ಭಾರತದ ನ್ಯಾಯಾಲಯದ ವ್ಯವಸ್ಥೆಯನ್ನು ನಾವು ನೋಡಬಹುದಾಗಿದೆ.
ಅಲ್ಲದೆ ಸಮಾಜದಲ್ಲಿ ಇರುವ ಆರ್ಥಿಕತೆಯ ಸಮಸ್ಯೆ ಇರುವಂತಹ ಜನರಿಗೂ ಅನುಕೂಲವಾಗಲೆಂದು *ಕಾನೂನು ಸೇವಾ ಪ್ರದಿಕಾರವನ್ನು * ಸಹ ನಾವು ನೋಡಬಹುದಾಗಿದೆ. ಇದು ಪ್ರತಿ ಜಿಲ್ಲಾ ನ್ಯಾಯಾಲಯದಲ್ಲಿ ಮತ್ತು ಕೆಲವು ಕಾನೂನು ಕಾಲೇಜುಗಳಲ್ಲಿ ನಾವು ಇದರ ಸದುಪಯೋಗವನ್ನು ಮಾಡಿಕೊಳ್ಳಬಹುದಾಗಿದೆ. ಈ ಮೇಲಿನ ರೀತಿಯಲ್ಲಿ ನ್ಯಾಯವಾದಿ ಸಮಾಜದ ಬೆಳವಣಿಗೆಯಲ್ಲಿ ತನ್ನದೇ ಪಾತ್ರವನ್ನು ವಹಿಸುತ್ತಿದ್ದಾರೆ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ಸಮಾಜದ ಡಾಕ್ಟರ್ ಕೊಡ ಆಗಿದ್ದಾನೆ.
ಸಮಾಜ ಸೇವೆ ಎಂದರೆ ಬರಿ ಆರ್ಥಿಕವಾಗಿ ಅಥವ ವಸ್ತುಗಳ ರೀತಿಯಲ್ಲಿ ಸೇವೆ ಮಾಡುವುದು ಅಷ್ಟೇ ಅಲ್ಲ ಸಮಾಜದಲ್ಲಿ ಹಲವಾರು ಸಮಸ್ಯೆಗಳಿವೇ ಆ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸಹ ಒಂದು ಸಮಾಜ ಸೇವೆ ಅದೇ ರೀತಿ ಒಬ್ಬ ವ್ಯಕ್ತಿಗೆ ಆಗಿರುವ ಕಾನೂನಿನ ಸಮಸ್ಯೆಯನ್ನು ಪರಿಹಾರ ಮಾಡುವುದು ಸಹ ಒಂದು ಸಮಾಜ ಸೇವೆ ಎಂದು ಹೇಳಬಹುದು.
ಸಮಾಜದಲ್ಲಿ ಬಹಳ ಜನರು ನಾವು ಸಮಾಜ ಮುಖಿ ಕೆಲಸಗಳನ್ನು ಮಾಡಬೇಕು , ಸಮಾಜ ಸೇವೆ ಮಾಡಬೇಕು ಎಂದು ಹೇಳುವ ಮೂಲಕ ಬರೀ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಹೋಗುವುದನ್ನು ನಾವು ನೋಡುತ್ತಿದ್ದೇವೆ ಆದರೆ ಸರಿಯಾಗಿ ಸಮಾಜ ಸೇವೆ ಮಾಡಬೇಕೆಂದರೆ ಅಥವಾ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಯಾವುದೇ ವ್ಯಕ್ತಿ ವಕೀಲ ವೃತ್ತಿಯನ್ನು ಆಯ್ಕೆ ಮಾಡುವ ಮೂಲಕ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚು ಕಾನೂನು ವಿಷಯಗಳಲ್ಲಿ ಹಲವಾರು ಜನರು ಸಮಸ್ಯೆಗಳನ್ನು ಅನುಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಆದ್ದರಿಂದ ಅದಕ್ಕೆ ಪರಿಹಾರ ವೆಂದರೆ ಇನ್ನು ಹೆಚ್ಚು ಹೆಚ್ಚು ಜನರು ಅದರಲ್ಲಿ ಯುವಕರು ಈ ನ್ಯಾಯವಾದಿ ವೃತ್ತಿಯನ್ನು ಪಡೆದು ಕೊಳ್ಳುವ ಮೂಲಕ ನಾವು ಸಮಾಜದ ಕೆಲಸವನ್ನು ಮಾಡಲು ಮತ್ತು ಈ ವಕೀಲರ ಸ್ವರ್ಗಧಾಮಕ್ಕೆ ತಮಗೆಲ್ಲರಿಗೂ ಪ್ರೀತಿಪೂರ್ವಕ ಸ್ವಾಗತಗಳು…..
ಸರ್ವರಿಗೂ ಸಂವಿಧಾನ ದಿನಾಚರಣೀಯ ಶುಭಾಶಯಗಳು
ಲೇಖನ-ಯ. ಬ. ದ. ಕ.(ಯಳನಾಡು ಬಡಗಿ ದಾಸಪ್ಪನ ಮಗ ಕರಿಯಣ್ಣ)
ವಕೀಲರು ಮೈಸೂರು.