i
ವಿವಿಧ ಶ್ರೇಣಿಯ 600 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಕಾಲ ಸಂದೇಶ ಯೋಜನೆ ವತಿಯಿಂದ ಹಾಲು ಉತ್ಪಾದಕ ಮಹಮಂಡಲಿಯ ಸದಸ್ಯರ ಜೀವನಕ್ಕೆ ಅನುಕೂಲವಾಗುವಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವ ಉದ್ಯೋಗಕ್ಕೆ ಆಸಕ್ತಿಯಿರುವ ಮತ್ತು ಉತ್ತಮ ವಿದ್ಯಾಭ್ಯಾಸ ಮಾಡಿರುವ ಸದಸ್ಯರ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ವಿಟಲಿಟಿ ಡಿಜಿಟಲ್ ಟೆಕ್ ಐ.ಟಿ. ಸಂಸ್ಥೆಯ ಸಹಭಾಗಿತ್ವವನ್ನು ಹೊಂದಲಾಗಿದೆ.
ವಿಟಲಿಟಿ ಡಿಜಿಟಲ್ ಟೆಕ್ ಐ.ಟಿ. ಉದ್ಯಮ ಸಂಸ್ಥೆಯು ಕರ್ನಾಟಕದ ಎಲ್ಲಾ ತಾಲ್ಲೂಕು ಮಟ್ಟದಲ್ಲಿ ಮನೆಯಿಂದಲೇ ಕೆಲಸ ನಿರ್ವಹಣೆ (ವರ್ಕ್ ಪ್ರಮ್ ಹೋಮ್) ಹಾಗೂ ವಿವಿಧ ಶ್ರೇಣಿಯ ಹುದ್ದೆಗಳಿಗೆ 600 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ರೀತಿಯ ಶುಲ್ಕ ಪಾವತಿಸುವಂತಿರುವುದಿಲ್ಲ. ಉತ್ತಮ ಕ್ರಿಯಾಶೀಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಯನ್ನು www.vitalitydigital.tec ಅಥವಾ ಇ-ಮೇಲ್ ವಿಳಾಸ vitalityitsector@gmail.com ಮೂಲಕ ಪಡೆಯಬಹುದು ಎಂದು ಸಕಾಲ ಸಂದೇಶ ಯೋಜನೆಯ ನಿರ್ದೇಶಕರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.