i
ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಇಡೀ ರಾಜ್ಯಕ್ಕೆ ಶಿವಮೊಗ್ಗ ಹಾಲು ಒಕ್ಕೂಟ ಪ್ರಥಮ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಇಡೀ ರಾಜ್ಯಕ್ಕೆ ಶಿವಮೊಗ್ಗ ಹಾಲು ಒಕ್ಕೂಟ ಪ್ರಥಮದಲ್ಲಿದೆ ಎಂದು ಬೀರೇನಹಳ್ಳಿ ಹಾಲು ಉತ್ಪಾದಕ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ರಾಮಯ್ಯ ಹೇಳಿದರು.
ಹಿರಿಯೂರು ತಾಲೂಕಿನ ಬೀರೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕ ಸಂಘದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ಪೀಕರಿಸಿ ಮಾತನಾಡಿದರು. ಬೀರೇನಹಳ್ಳಿ ಸುತ್ತ ಮುತ್ತ ಸೇರಿದಂತೆ ಹಿರಿಯೂರು ತಾಲೂಕಿನಾದ್ಯಂತ ಅತಿ ಗುಣಮಟ್ಟದ ಹಾಲನ್ನು ರೈತರು ಉತ್ಪಾದಿಸಿ ಹಾಲು ಒಕ್ಕೂಟಕ್ಕೆ ನೀಡುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ರೈತರ ಅನೇಕ ಸಮಸ್ಯೆಗಳು ಹಾಲು ಉತ್ಪಾದನೆ ಮಾಡುವುದರಿಂದ ನಿವಾರಣೆಯಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಹಾಕು ಒಕ್ಕೂಟದ ಅಧ್ಯಕ್ಷ ಎನ್.ಎಚ್.ಶ್ರೀಪಾದರಾವ್ ಮಾತನಾಡಿ ಹಸು ಸಾಕಾಣಿಕೆ ಮಾಡುವಂತ ರೈತರಿಗೆ ಒಕ್ಕೂಟದಿಂದ ಸಾಕಷ್ಟು ಯೋಜನೆಗಳಿದ್ದು ಆ ಎಲ್ಲ ಯೋಜನೆಗಳ ಲಾಭವನ್ನು ಪಡೆದು ಆರ್ಥಿಕವಾಗಿ ರೈತರು ಸಬಲರಾಗಬೇಕು ಎಂದು ಕರೆ ನೀಡಿದರು.
ಗುಣಟ್ಟದ ಹಾಲು ಉತ್ಪಾದನೆಗೆ ಶಿವಮೊಗ್ಗ ಹಾಲು ಒಕ್ಕೂಟ ಮತ್ತೊಂದು ಹೆಸರು. ಇಡೀ ರಾಜ್ಯಕ್ಕೆ ಶಿವಮೊಗ್ಗ ಹಾಲು ಒಕ್ಕೂಟ ಪ್ರಥಮ ಸ್ಥಾನದಲ್ಲಿದೆ ಎಂದು ಅಧ್ಯಕ್ಷರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೀರೇನಹಳ್ಳಿ ಹಾಲು ಉತ್ಪಾದಕ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮಯ್ಯನವರ ಪರಿಶ್ರಮದಿಂದಾಗಿ ಇಂದು ಸ್ವಂತ ಕಟ್ಟ ಹೊಂದುವಂತ ಭಾಗ್ಯ ಸಿಕ್ಕಿದೆ. ಈ ಹಿಂದೆ ತನ್ನ ಮನೆಯಲ್ಲೇ ಬಾಡಿಗೆ ರಹಿತವಾಗಿ ಹಾಲು ಉತ್ಪಾದಕ ಸಂಘ ನಡೆಸುವ ಮೂಲಕ ಸಂಘಕ್ಕೆ ಸಾಕಷ್ಟು ಹಣವನ್ನು ಉಳಿಸಿದ ಕೀರ್ತಿ ರಾಮಯ್ಯನವರಿಗೆ ಸಲ್ಲುತ್ತದೆ ಎಂದು ಅಧ್ಯಕ್ಷರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೀರೇನಹಳ್ಳಿ ಸಂಘದ ಅಧ್ಯಕ್ಷ ಬಿ.ಎಂ.ಜಗನ್ನಾಥ್, ಹಾಲು ಒಕ್ಕೂಟದ ನಿರ್ದೇಶಕ ಯಶವಂತರಾಜ್ ಮಾತನಾಡಿ, ನೂತನ ಕಟ್ಟಡ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸುವ ಮೂಲಕ ದೊಡ್ಡ ಹೆಸರು ಮಾಡಿದ್ದು ರಾಮಯ್ಯನವರು. ಇವರ ಸೇವೆ ಇತರರಿಗೆ ಮಾದರಿಯಾಗಿದೆ. ಬಗರಂ ಹುಕುಂ ಯೋಜನೆಯಲ್ಲೂ ಭೂ ರಹಿತ ರೈತರಿಗೆ ಜಮೀನು ಮಂಜೂರು ಮಾಡಿಸಿ ಅನುಕೂಲ ಮಾಡಿದ್ದಲ್ಲದೆ ಆರ್ಥಿಕವಾಗಿ ಸಬಲರಾಗಲು ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿ ಮಾದರಿಯಾಗಿದ್ದಾರೆಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ನಡೆದ ಹೋರಾಟದಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಸೇರಿದಂತೆ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ರಾಮಯ್ಯನವರ ಸೇವೆ ಮರೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ರೈತ ಹೋರಾಟದಲ್ಲೂ ಕೆ.ರಾಮಯ್ಯ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬುಡೇನಸಾಬ್, ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜಪ್ಪ, ಕರಿಯಪ್ಪ, ವಿಜಯಕುಮಾರ್ ಮತ್ತಿತರರು ಕೆ.ರಾಮಯ್ಯ ಇವರನ್ನು ವೈಯಕ್ತಿಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಚ್.ಕೆ.ಬಸಪ್ಪ, ವೀರಭದ್ರಸ್ವಾಮಿ, ತಿಪ್ಪೇಸ್ವಾಮಿ, ಎನ್.ಎಚ್.ಭಾಗ್ಯ, ಡಾ.ಕೆ.ಎಸ್.ಬಸವರಾಜ್, ಡಾ.ಕೆ.ಮುರುಳೀಧರ, ಡಾ.ಕೆ.ಪಿ.ಸಂಜಯ್, ಡಾ.ರಂಜಿತಾ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.