i
ಪರಮೇಶ್ವರನ್ನ ಸೋಲಿಸಿದ್ದು ಕಾಂಗ್ರೆಸ್ನವರೇ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರನ್ನು ಏಕೆ ಸಿಎಂ ಮಾಡಲಿಲ್ಲ?…
ಚಂದ್ರವಳ್ಳಿ ನ್ಯೂಸ್, ಕೊರಟಗೆರೆ:
ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕಾಂಗ್ರೆಸ್ನವರೇ ಸೋಲಿಸಿದ್ದೆಂದು ಆ ಪಕ್ಷದವರೇ ಮಾತನಾಡಿರೆ, ಅವರು ಅಧ್ಯಕ್ಷರಾಗಿದ್ದಾಗ ಅಕೆ ಮುಖ್ಯಮಂತ್ರಿ ಮಾಡಲಿಲ್ಲ, ಅಂದು ಮಾಡದವರು ಮಾಡುತ್ತಾರೆಯೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೊರಟಗೆರೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರಟಗೆರೆ ಕ್ಷೇತ್ರಕ್ಕೆ ಸುಧಾಕರ್ ಅಭ್ಯರ್ಥಿ, ಅವರು ಗೆಲುವು ಬಹಳ ಮುಖ್ಯ, ಅವರು ಗೆದ್ದರೆ ನನ್ನ ಸರ್ಕಾರ ಬರಲು ಸಾಧ್ಯ, ಹಾಗಾಗಿ ನನ್ನ ಅಭ್ಯರ್ಥಿ ಸುಧಾಕರಲಾಲ್ ಗೆಲುಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ 2023ಕ್ಕೆ ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ಕಾರ್ಯಕರ್ತರ ಕೈಯಲ್ಲಿದೆ. ಅಧಿಕಾರ ಕೊಟ್ಟರೆ ಪಂಚರತ್ನ ಯೋಜನೆ ಜಾರಿಗೆ ತರಲಾಗುವುದು ಎಂದರು.
ಪಂಚರತ್ನ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಬೃಹತ್ ಆಸ್ಪತ್ರೆ, ವೃದ್ದರಿಗೆ ತಿಂಗಳಿಗೆ 1ನೇ ತಾರೀಕಿಗೆ ಸರಿಯಾಗಿ 5000 ರೂ., ವಿಧವೆಯರಿಗೆ 2500 ಪಿಂಚಣಿ, ಸ್ರೀ ಶಕ್ತಿ ಸಂಘಗಳ ಸಾಲ ಮನ್ನಾದ ಜೊತೆಗೆ ಸರ್ಕಾರದಿಂದ ನೇರ ಉತ್ತೇಜನ ಹಣ, ಗ್ರಾಮಾಂತರ ಮಕ್ಕಳಿಗೆ ಖಾಸಗಿ ಶಾಲೆ ರೀತಿ ಸರ್ಕಾರಿ ಶಾಲೆ, ರೈತರಿಗೆ ಸಂಪೂರ್ಣ ಸಾಲ ಮನ್ನಾ, ಯುವಕರಿಗೆ ಉದೋಗ್ಯ ಉತ್ತೇಜನ, ಮಹಿಳೆಯರಿಗೆ ಸ್ವಯಂ ಉದ್ಯೋಗ, ಎಲ್ಲರಿಗೂ ವಸತಿ ಯೋಜನೆ, ಸೇರಿದಂತೆ ಬಡವರಿಗೆ ನಾನು ಈ ಕಾರ್ಯಕ್ರಮ ನೀಡಬೇಕಾದರೆ ನನಗೆ ಶಕ್ತಿ ತುಂಬಿ ಸಂಪೂರ್ಣ ಬೆಂಬಲದ ಸರ್ಕಾರ ಕೊಡಿ, ಜನರ ಹಣ ಲೂಟಿಯಾಗುತ್ತಿದೆ ನಮ್ಮ ಪಕ್ಷ ಬಂದರೆ ಬಡವರ ಕಲ್ಯಾಣವೆ ಗುರಿ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಮಾಜಿ ಶಾಸಕ ಸುಧಾಕರಲಾಲ್ ಅವರು ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಮಾಡಿ ಕಾರ್ಯಕರ್ತರಿಗೆ ಮತದಾರರಿಗೆ ಧನ್ಯವಾದ ತಿಳಿಸಿದರು.
ಈ ಯಾತ್ರೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಂಜಿನಪ್ಪ, ಕಾರ್ಯಾಧ್ಯಕ್ಷ ಮಹಾಲಿಂಗಪ್ಪ, ಮಾಜಿ ಜಿ.ಪಂ ಸದಸ್ಯ ಶಿವರಾಮಯ್ಯ, ತಿಮ್ಮಯ್ಯ, ಕ್ಷೇತ್ರದ ಕಾರ್ಯಾಧ್ಯಕ್ಷ ನರಸಿಂಹರಾಜು, ಸಿದ್ದಮಲ್ಲಯ್ಯ ಸೇರಿದಂತೆ ಇತರರು ಹಾಜರಿದ್ದರು.