i
ವಕೀಲರು ಸೇರಿದಂತೆ ಅಪಾರ ಸಂಖ್ಯೆ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಹಿರಿಯ ವಕೀಲ ಐ.ಎಲ್. ಪಾಟೀಲ ಅವರು ತಮ್ಮ ಅಪಾರ ಅಭಿಮಾನಿ ಮತ್ತು ಬಂಧುಗಳೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ವಿಜಯಪುರ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂದಗಿ ಮತ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ವಕೀಲ ಪಾಟೀಲ ಅವರು ಇಡೀ ಕ್ಷೇತ್ರದಲ್ಲಿ ಚಿರಪರಿಚತರಾಗಿದ್ದು ಹಲವಾರು ಸಾಮಾಜಿಕ ಕಾರ್ಯಗಳನ್ನು ಸಿಂದಗಿ ಮತಕ್ಷೇತ್ರದಲ್ಲಿ ಮಾಡುತ್ತಾ ಬಂದಿದ್ದು, ನನ್ನ ಪರವಾಗಿ ಮತಕ್ಷೇತ್ರದಲ್ಲಿ ಜನತೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷವಾದ ಜನತಾದಳದ ಅಕಾಂಕ್ಷಿಯಾದ ನನಗೆ ಪಕ್ಷವು ಟಿಕೆಟ್ ನೀಡುವ ಭರವಸೆ ನೀಡಿದೆ ಎಂದು ಐ.ಎಲ್. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಜಾತ್ಯತೀತ ಜನತಾದಳವು ಸಿಂದಗಿ ಮತಕ್ಷೇತ್ರದಲ್ಲಿ ತನ್ನದೆಯಾದ ಪ್ರಾಬಲ್ಯ ಹೊಂದಿದೆ. ಹಿಂದಿನ ಜೆಡಿಎಸ್ ಸರ್ಕಾರವು ಮಾಡಿದ ಅಭಿವೃದ್ದಿ ಕಾರ್ಯಗಳು ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಹುಸೇನ ಬಾಗಾಯತ, ಜಿಲ್ಲಾ ಎಸ್.ಸಿ.ಎಸ್.ಟಿ.ಅಧ್ಯಕ್ಷ ಸುಭಾಸ ನಾಯಕ, ತಾಲ್ಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ, ರಜಾಕ ಬಿಜಾಪೂರ, ಎ.ಎಂ.ಲೋಗಾಂವ, ಎಂ.ಎಂ. ಅವಟಿ, ಬಿ.ಸಿ. ರೇವೂರ, ಜಿ.ಎಸ್. ಆಲಗೂರ, ವಿ.ಎಸ್. ಪಾಟೀಲ, ಉಸ್ಮಾನ ಆಲಗೂರ ಇದ್ದರು.