i
ಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಯೋಜನೆ: ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಣ್ಣ ಕುಲಕರ್ಮಿಗಳ ಸಾಮಾಜಿಕ, ಆರ್ಥಿಕ ಉನ್ನತಿಗಾಗಿ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಕುಶಲಕರ್ಮಿಗಳಿಗಾಗಿ ಸಾಲ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
76ನೇ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮುಖ್ಯಮಂತ್ರಿ ಅವರು ಘೋಷಿಸಿದಂತೆ ಕುಶಲಕರ್ಮಿಗಳ ಅಭಿವೃದ್ಧಿಗಾಗಿ ಬೆಂಬಲ ಒದಗಿಸುವ ಸಾಲ ಸಹಾಯಧನ ಯೋಜನೆಯನ್ನು ಅನುಷ್ಠಾನಗೋಳಿಸಲು ಉದ್ದೇಶಿಸಿ ಬ್ಯಾಂಕುಗಳಿಂದ ಯೋಜನಾ ವೆಚ್ಚ ರೂ 50000/-ಗಳಿದ್ದು, ಇದರಲ್ಲಿ ಬ್ಯಾಂಕ್ ಸಾಲದ ಮೊತ್ತ ರೂ 35000/- ಮತ್ತು ಸರ್ಕಾರದ ಸಹಾಯಧನ ರೂ 15000/- ಇರುತ್ತದೆ.
ಆಸಕ್ತಿ ಇರುವ ಜಿಲ್ಲೆಯ ಕಮ್ಮಾರಿಕೆ, ಬುಟ್ಟಿ ಹೆಣೆಯುವವರು, ಗೋಲ್ಢ ಸ್ಮಿತ್, ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಕುಂಬಾರಿಕೆ, ಮಣ್ಣಿನ ವಿಗ್ರಹ, ಲೋಹದ ಕರಕುಶಲ, ಬೆತ್ತ ಮತ್ತು ಬಿದಿರು, ಕಸೂತಿ, ಕಂಬಳಿ ನೇಯುವವರು, ಚಾಪೆ ಹೆಣೆಯುವವರು, ಲಂಬಾಣಿ ಕಸೂತಿ ಕುಶಲಕರ್ಮಿಗಳ ಸಾಲಕ್ಕಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿ ಇರುವ 18 ವರ್ಷ ಪೂರ್ಣಗೊಂಡ ಕುಶಲಕರ್ಮಿಗಳು ಅರ್ಜಿಗಳನ್ನು ಪಡೆದು ಅರ್ಜಿಯ ಜೊತೆಯಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ಕಛೇರಿಯಿಂದ ನೀಡಿದ ಗುರುತಿನ ಕಾರ್ಡ್ ಅಥವಾ ಕೈಗಾರಿಕಾ ವಿಸ್ತರಣಾಧಿಕಾರಿ, ಪಿಡಿಓ ಇವರಿಂದ ದೃಢೀಕರಣ ಪತ್ರ, ಆಧಾರ ಕಾರ್ಡ್ ಸ್ವಯಂ ದೃಢೀಕರಣ ಪತ್ರ , ಯೋಜನಾ ವರದಿ ದ್ವಿ ಪ್ರತಿಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಕಾ ಕೇಂದ್ರ, ಚಿತ್ರದುರ್ಗ ಇವರಿಗೆ ಜನವರಿ 25ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08194-235994/235817, ಉಪನಿರ್ದೇಶಕರು-9591442646, ಉಪನಿರ್ದೇಶಕರು (ಖಾಗ್ರಾ), ಜಿಲ್ಲಾ ಪಂಚಾಯಿತಿ 08194-295979 ಸಹಾಯಕ ನಿರ್ದೇಶಕರು-9845354081 ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ-9590606323 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಕೋರಿದ್ದಾರೆ.