i
ಭದ್ರಾಗೆ ಹಣ ಮೀಸಲು ಸಂತಸ, ಆದಾಯ ದ್ವಿಗುಣ ಮರೀಚಿಕೆ: ಹೊರಕೇರಪ್ಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು;
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಬಹುದಿನಗಳ ಕನಸಿನ ಯೋಜನೆಗೆ 5300 ಕೋಟಿ ಮೀಸಲಿಟ್ಟಿರುವುದು ಸಂತಸದ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೇಗ ಹೆಚ್ಚಿಸಿ, ಕಾಲಮಿತಿಯಲ್ಲಿ ಕಾಮಗಾರಿ ಪೂರೈಸಬೇಕಾಗಿದೆ. ಕಳೆದ ವರ್ಷದ ರಾಜ್ಯ ಬಜೆಟ್ ನಲ್ಲಿ ಮೂರು ಕೋಟಿ ಮೀಸಲಿಟ್ಟಿದ್ದು 1465 ಕೋಟಿ ರೂಗಳು ಮಾತ್ರ ಖರ್ಚಾಗಿದ್ದು, ಆದರೆ ಗುತ್ತಿಗೆದಾರರ 900 ಕೋಟಿ ರೂಪಾಯಿ ಬಾಕಿ ಹಾಗೆಯೇ ಉಳಿದಿದೆ.
ಕೇಂದ್ರ ಸರ್ಕಾರ ಕಳೆದ ಚುನಾವಣಾ ಪ್ರನಾಳಿಕೆಯಲ್ಲಿ ದೇಶದ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದು, ಇದು ಬರೀ ಭರವಸೆಯಾಗಿಯೇ ಉಳಿದಿದೆ, ಅಲ್ಲದೆ, ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳೆಲ್ಲಾ ಹಾಗೆಯೇ ಉಳಿದಿವೆ ಎಂದು ಟೀಕಿಸಿದರು.