i
ಮುಖ್ಯಮಂತ್ರಿಗಳ ಆದೇಶ ಧಿಕ್ಕರಿಸಿದ ಪೌರಾಡಳಿತ ಸಚಿವ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಪಿಟಿಶನ್ ಸಂಖ್ಯೆ:6959/2022, ದಿನಾಂಕ:20-07-2022ರ ದೈನಂದಿನ ಆದೇಶದನ್ವಯ, ರಾಜ್ಯ ಸರ್ಕಾರವು ಕರ್ನಾಟಕ ಪೌರಾಡಳಿತ ಸೇವಾ ಅಧಿಕಾರಿಗಳ(ವೃಂದ ಮತ್ತು ನೇಮಕಾತಿ) ನಿಯಮಗಳು 2022, ದಿನಾಂಕ:07-02-2022 ರಿಂದ ಜಾರಿಗೆ ಬಂದಿರುತ್ತವೆ. ಈ ಅಧಿಸೂಚನೆ ವಿಶೇಷ ರಾಜ್ಯ ಪತ್ರಿಕೆಯಲ್ಲಿಯೂ ಸಹ ಪ್ರಕಟಗೊಂಡಿದ್ದವು.
ಈ ನಿಯಮದಲ್ಲಿ, ಗ್ರೇಡ್-1 ನಗರಸಭೆಗೆ, ಗ್ರೇಡ್-1 ಪೌರಾಯುಕ್ತರು. ಗ್ರೇಡ್-2 ನಗರಸಭೆಗೆ, ಗ್ರೇಡ್-2 ಪೌರಾಯುಕ್ತರು. ಪುರಸಭೆಗೆ ಮುಖ್ಯಾಧಿಕಾರಿ ಶ್ರೇಣಿ-1, ಮತ್ತು ಪಟ್ಟಣ ಪಂಚಾಯತಿಗೆ ಮುಖ್ಯಾಧಿಕಾರಿ ಶ್ರೇಣಿ-2 ಇರಬೇಕೇಂದು ಇರುತ್ತದೆ.
ಕಾಂತರಾಜ. ಹೆಚ್. ಮುಖ್ಯಾಧಿಕಾರಿ ಶ್ರೇಣಿ-1, ಪಟ್ಟಣ ಪಂಚಾಯತಿ ಮೊಳಕಾಲ್ಮೂರು ಇವರನ್ನು ಸರ್ಕಾರದ ಅಧಿಸೂಚನೆ ದಿನಾಂಕ:31-01-2023ರ ರಂತೆ ಚಿತ್ರದುರ್ಗ ನಗರಸಭೆಯಲ್ಲಿ ಖಾಲಿ ಇರುವ ಪೌರಾಯುಕ್ತರ ಹುದ್ದೆಗೆ ನೇಮಿಸಿ ವರ್ಗಾಯಿಸಲಾಗಿದೆ.
ಈ ಅಧಿಸೂಚನೆ ಹೊರಡುವ ಮೊದಲು ದಿನಾಂಖ:23-01-2023ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ಟಿಪ್ಪಣಿಯಲ್ಲಿ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ಹಾಗೂ ಆಯ-ವ್ಯಯ ಅಧಿವೇಶನ ಹಾಗೂ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಈ ಹಂತದಲ್ಲಿ ಯಾವುದೇ ವರ್ಗಾವಣೆ / ನಿಯೋಜನೆ ಪ್ರಸ್ಥಾವನೆಯನ್ನು ಸಲ್ಲಿಸದೇ ಇರಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಾಂತರಾಜ ಚಿತ್ರದುರ್ಗದ ನಿವಾಸಿಯಾಗಿದ್ದು ಇವರನ್ನು ನಿಯಮಬಾಹಿರವಾಗಿ ಪೌರಾಯುಕ್ತರ ಹುದ್ದೆಗೆ ನೇಮಕ ಮಾಡಿರುವುದು ಸರ್ಕಾರದ ನಿಯಮಾವಳಿಗೆ ವಿರುದ್ದವಾಗಿರುತ್ತದ
ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ತವರು ಜಿಲ್ಲೆಯ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ, ನಗರಾಭಿವೃದ್ದಿ ಇಲಾಖೆಗೆ ಪ್ರಸ್ಥಾವನೆ ಸಲ್ಲಿಸಬೇಕೆಂಬುದು ಪತ್ರಿಕೆಯ ಒತ್ತಾಸೆಯಾಗುದೆ.