i
ಮತದಾರರ ಆಶೀರ್ವಾದ ಹಾಗೂ ಬೆಂಬಲ ಕೋರಿ ಪತ್ರ ಬರೆದ ಭವ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಗುರು ಹಿರಿಯರಿಗೆ ಹಾಗೂ ಸ್ನೇಹಿತರಿಗೆ ನಿಮ್ಮ ಕ್ಷೇತ್ರದ ಮಗಳಿಂದ ನಿಮ್ಮ ಆಶೀರ್ವಾದ ಹಾಗೂ ಬೆಂಬಲ ಕೋರಿ ಪತ್ರ ಬರೆದಿರುವುದಾಗಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ ರಚನೆ ಮಾಡಲಿದೆ. 1.ಗೃಹ ಲಕ್ಷ್ಮಿ – ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ, 2 ಗೃಹ ಜ್ಯೋತಿ – ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ರಾಜಾಜಿನಗರ ಕ್ಕೆ “10 ಭವ್ಯ ಭರವಸೆಗಳು” ಕ್ಷೇತ್ರದಲ್ಲಿ ನಾ ಕಂಡ ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರಗಳು ಎಂದು ಪಟ್ಟಿ ಮಾಡಿ ಭವ್ಯ ನರಸಿಂಹಮೂರ್ತಿ ಟ್ವೀಟ್ ಮಾಡಿದ್ದಾರೆ.