i
ನಾಲಾಯಕ್ BJP ಸರ್ಕಾರ ಕಿತ್ತೆಸೆಯಲು ಸಿದ್ಧರಾಗಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶೇಷ ಅನುದಾನ ಹಂಚಿಕೆಯಲ್ಲಿ ಕರ್ನಾಟಕವನ್ನು ಕಡೆಗಣಿಸುವ ಮೂಲಕ ಕೇಂದ್ರ ಸರ್ಕಾರವು ಕನ್ನಡಿಗರನ್ನು ಕಸಕ್ಕಿಂತಲೂ ಕಡೆಯಾಗಿ ನೋಡುತ್ತಿದೆ. ಡಬ್ಬಲ್ ಇಂಜಿನ್ ಸರ್ಕಾರದ ಪರಿಣಾಮ 5 ವರ್ಷಗಳಲ್ಲಿ ರಾಜ್ಯದ ಸಾಲ ಡಬ್ಬಲ್ ಆಗಿದೆ. ಇದು ಬಿಜೆಪಿ ಕನ್ನಡ ನಾಡಿನ ಜನರಿಗೆ ನೀಡಿರುವ ಗಿಫ್ಟ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಅವರು ಟ್ವೀಟ್ ಮಾಡಿ, ದಕ್ಷಿಣ ರಾಜ್ಯಗಳಿಂದ ದುಡ್ಡು ಬಾಚುವ ಕೇಂದ್ರವು ಅನುದಾನ ಹಂಚಿಕೆಯಲ್ಲಿ ಮಾತ್ರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುತ್ತಿದೆ. ತಿಂಗಳಿಗೆ 3 ಸಾರಿ ಬರಲು ಕೇಂದ್ರ BJP ನಾಯಕರಿಗೆ ಕರ್ನಾಟಕವು ಪಿಕ್ನಿಕ್ ಸ್ಪಾಟ್ ಮಾತ್ರ ಆಗಿದೆ. ಮೇಲೆ ಬಣ್ಣ ಬಣ್ಣದ ಮಾತನಾಡುವ BJP ಕನ್ನಡಿಗರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ.
ತೆರಿಗೆ ಕಟ್ಟೋದು ನಾವು ಅನುದಾನ ಪಡೆಯೋದು ಉ. ಭಾರತದ ರಾಜ್ಯಗಳು. ಪ್ರತಿ ಹಂತದಲ್ಲೂ ರಾಜ್ಯಕ್ಕೆ ಮೋಸ ಆಗುತ್ತಿದ್ದರೂ ಅದನ್ನು ಪ್ರಶ್ನಿಸದೆ ನಮಗೆ ಸಂಬಂಧವಿಲ್ಲ ಎಂದು ಕುಳಿತಿರುವ 25 BJP ಸಂಸದರನ್ನು ಪಡೆದ ನಾವೇ ಧನ್ಯರು. ನಾಲಾಯಕ್ BJP ಸರ್ಕಾರವನ್ನು ಕಿತ್ತೆಸೆಯಲು ಕನ್ನಡಿಗರು ಸಿದ್ಧರಾಗಿದ್ದಾರೆ ಗಂಟು ಮೂಟೆ ಕಟ್ಟೋಕೆ ರೆಡಿಯಾಗಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಡಿಕೆಶಿ ನೀಡಿದ್ದಾರೆ.