i
ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ಹೀನಾಯ ಸೋಲು ಖಚಿತ-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಈಬಾರಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹೀನಾಯವಾಗಿ ಸೋಲಲಿವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ರೈತ, ಬಡವ, ಮಹಿಳೆಯರ ಪರ ಆಡಳಿತ ನಡೆಸಲಿದ್ದೇವೆಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗದ ಮಲವಗೊಪ್ಪದಲ್ಲಿ ಪಂಚರತ್ನ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದ ಮೊದಲೇ ಜೆಡಿಎಸ್ ಪಕ್ಷ ಗೆಲ್ಲುವ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿದ್ದೇವೆ. 125 ಕ್ಷೇತ್ರಗಳಲ್ಲಿ ಜೆಡಿಎಸ್ ಗದ್ದೇ ಗೆಲ್ಲುಲಿದೆ. ಎಲ್ಲಾ ಪಕ್ಷಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. 72 ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಖುದ್ಧ ಭೇಟಿ ಮಾಡಿದ್ದೇನೆ. ರಥಯಾತ್ರೆ ಮೂಲಕ ನಿತ್ಯ 40 ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರನ್ನು ವೈಯಕ್ತಿಕವಾಗಿ ತಲುಪಿದ್ದೇನೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುವುದು ನಿಂತಿಲ್ಲ. ಸ್ವಚ್ಛಭಾರತ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಕಾಪಾಡಲು ಎಲ್ಲಾ ಸೌಲಭ್ಯವುಳ್ಳ ಆಸ್ಪತ್ರೆ ಮಾಡುವುದು ಉದ್ದೇಶ ಹೊಂದಿದ್ದೇನೆ. ಅನಾರೋಗ್ಯ ಸಮಸ್ಯೆ ಹೇಳಿಕೊಂಡು ನಿತ್ಯ ನೂರಾರು ಜನರು ಬರುತ್ತಾರೆ. ಇಂಥ ಬಡವರಿಗೆ ನಿತ್ಯ ನಾನು ಹೇಗೆ ಹಣ ಕೊಡಲಿ ಎಂದರು.
ಕಾಂಗ್ರೆಸ್ ನಿಂದ ಉಚಿತ 200 ಯೂನಿಟ್ ವಿದ್ಯುತ್, 2000 ರೂ ನೀಡಲು ಹೇಗೆ ಹಣ ಹೊಂದಿಸುತ್ತಾರೆ. ಆಡಳಿತ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕಮಿಷನ್ ಪಡೆಯುವುದನ್ನ ಕಣ್ಣಾರೆ ನೋಡಿರುವೆ. ಮಾಡಿರುವ ಸಾಲಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ಬಡ್ಡಿ ಕಟ್ಟಬೇಕು. ಬಿಜೆಪಿ ಕಾಂಗ್ರೆಸ್ ಮಾಡಿರುವ ಸಾಧನೆ ಸಾಲ ಹೊರತು ಬೇರೆಯಲ್ಲ. ಐದು ವರ್ಷದ ಸರ್ಕಾರ ಆಡಳಿತ ಮಾಡಲು ಅವಕಾಶ ನೀಡಬೇಕೆಂದು ಯಾತ್ರೆ ಹೊರಡುತ್ತಿರುವೆ ಎಂದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ರೈತರ ಸಾಲ ಮಾಡಬೇಡಿ ಅಂತಾನೆ ಎಂದು ವಾಗ್ದಾಳಿ ಮಾಡಿದ ಅವರು, ಕೆಎಂಎಫ್ ದೊಡ್ಡ ಮಟ್ಟಕ್ಕೆ ಬೆಳೆಯಲು ರೇವಣ್ಣರ ಕೊಡುಗೆ ದೇವೇಗೌಡರ ಕುಟುಂಬದ ಪಾತ್ರ ದೊಡ್ಡದಿದೆ. ಜಯದೇವ ಆಸ್ಪತ್ರೆ ಇಂದು ಹೇಗಿದೆ ಇದಕ್ಕೆ ಕಾರಣ ದೇವೇಗೌಡರ ಕುಟುಂಬವಾಗಿದೆ ಎಂದು ಹೇಳಿದರು.