i
ಹಿರಿಯೂರು ಸಮೀಪ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಓರ್ವ ಸಾವು, ಐದಾರು ಮಂದಿಗೆ ಗಂಭೀರ ಗಾಯ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: accident in hiriyur
ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಐದಾರು ಮಂದಿಗೆ ಗಾಯವಾಗಿರುವ ಘಟನೆ ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಸಮೀಪ ಜರುಗಿದೆ.
ತಾಲೂಕಿನ ರಂಗಾಪುರ ಗ್ರಾಮದಿಂದ ಜವಗೊಂಡನಹಳ್ಳಿ ಗಾರ್ಮೆಟ್ಸ್ ಕೆಲಸಕ್ಕೆ ತೆರಳುತಿದ್ದ ಆಟೋ ಗೌಡನಹಳ್ಳಿ ತೋಟದ ಹತ್ತಿರ ಅಪಘಾತವಾಗಿದೆ. ಆಟೋದಲ್ಲಿದ್ದ ದೇವರಾಜ್(32) ಸ್ಥಳದಲ್ಲೇ ಸಾವನಪಿದ್ದು ಜೊತೆಗೆ 5-6 ಜನಕ್ಕೆ ಗಂಭೀರ ಗಾಯಗಳಾಗಿದೆ.
ಗಾರ್ಮೆಂಟ್ಸ್ ಕೆಲಸಕ್ಕಾಗಿ ತಾಲೂಕಿನ ವಿವಿಧ ಹಳ್ಳಿಗಳಿಂದ ಹತ್ತಾರು ಕಾರ್ಮಿಕರನ್ನು ತುಂಬಿಕೊಂಡು ಆಟೋಗಳು ಸೇರಿದಂತೆ ಮತ್ತಿತರ ವಾಹನಗಳಲ್ಲಿ ಸಂಚರಿಸುತ್ತಿದ್ದು ಪದೇ ಪದೇ ಅಪಘಾತಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಸಾಕಷ್ಟು ಮಂದಿ ಕೈ ಕಾಲು ಮುರಿದುಕೊಂಡು ಊನರಾಗುತ್ತಿದ್ದಾರೆ. ಆಟೋ ಸಂಚಾರ ರದ್ದು ಮಾಡಿ ಗ್ರಾಮೀಣ ಬಸ್ ಸಾರಿಗೆ ಆರಂಭಿಸುವಂತೆ ಗಾರ್ಮೆಂಟ್ಸ್ ಕೂಲಿ ಕಾರ್ಮಿಕರು ಒತ್ತಾಯಿಸಿದ್ದಾರೆ.
ಸಂತ್ವಾನ- ಅಪಘಾತ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಸಚಿವ ಡಿ.ಸುಧಾಕರ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಡಿ.ಟಿ.ಶ್ರೀನಿವಾಸ್ ಮತ್ತಿತರ ರಾಜಕೀಯ ನಾಯಕರು ದೌಡಾಯಿಸಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲ ಒಂದಿಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ.