i
ಮತದಾರರೇ ಜೆಡಿಎಸ್ ಅಭ್ಯರ್ಥಿಗೆ 55 ಲಕ್ಷ ರೂ.ಸಂಗ್ರಹ ಮಾಡಿ ದೇಣಿಗೆ ನೀಡಿರುವುದು ನಮ್ಮ ರಾಜ್ಯದಲ್ಲೇ…
ಚಂದ್ರವಳ್ಳಿ ನ್ಯೂಸ್, ಹುಣಸೂರು:
ರಾಜಕೀಯ ಸಂಪೂರ್ಣ ಗಬ್ಬೆದ್ದು ನಾರುತ್ತಿದೆ, ಮತದಾರರು ದುಡ್ಡು ಕೊಟ್ಟರೆ ಮಾತ್ರ ಮತ ಹಾಕುತ್ತಾರೆ, ರಾಜಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎನ್ನುವ ಕೊರಗಿನ ಮಧ್ಯಯೂ ಮತದಾದರರೇ ಜೆಡಿಎಸ್ ಅಭ್ಯರ್ಥಿಗೆ ಲಕ್ಷಾಂತರ ರೂ.ಗಳ ದೇಣಿಗೆ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭೆ ಕ್ಷೇತ್ರದಲ್ಲಿ ಜರುಗಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ಅಖಾಡ ರಂಗೇರಿದೆ. ಜೆಡಿಎಸ್ ಗೆಲ್ಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರು ಘೋಷಿತ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ಗೌಡಗೆ ಭರಪೂರ ದೇಣಿಗೆ ನೀಡುವ ಮೂಲಕ ಇನ್ನೂ ಉತ್ತಮರಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ.
ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಹರವೆ ಗ್ರಾಮದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಉದ್ಯಮಿ ಶ್ರೀಧರ್ ನೇತೃತ್ವದಲ್ಲಿ ಅಭಿಮಾನಿಗಳ ತಂಡ 25 ಲಕ್ಷ ರೂ.ಗಳನ್ನು ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ಚೆಲ್ಲಹಳ್ಳಿಯ ಉದ್ಯಮಿ ಮಂಜು ಕೂಡಾ 30 ಲಕ್ಷ ರೂ.ಗಳ ಚೆಕ್ ಅನ್ನು ಅಭ್ಯರ್ಥಿಗೆ ನೀಡಿ ಗೆದ್ದು ಬರಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.