i
ನುರಿತ ತಜ್ಞ ವೈದ್ಯರುಗಳ ತಂಡದಿಂದ ಉಚಿತ ಆರೋಗ್ಯ ಶಿಬಿರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸತ್ಯಮೇವ ಜಯತೆ ಯುವ ಶಕ್ತಿ ಸಂಘ ಚಿತ್ರದುರ್ಗ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿರಿಯೂರು. ಎಸ್.ಎಸ್.ಸ್ಪರ್ಶ ಆಸ್ಪತ್ರೆ, ರಾಜರಾಜೇಶ್ವರಿ ನಗರ, ಬೆಂಗಳೂರು. ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ, ಚಿತ್ರದುರ್ಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಿರಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಐಮಂಗಲ ಇದರ ಸಹಯೋಗದೊಂದಿಗೆ ಲಿಂಗೈಕ್ಯ ವೈ.ಓಂಕಾರಮೂರ್ತಿ ನಿವೃತ್ತ ಎ.ಎಸ್.ಐ ಪೊಲೀಸ್ ಇಲಾಖೆ ಇವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವದ್ದೀಕೆರೆ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಮಾರ್ಚ್-10ರ ಶುಕ್ರವಾರ ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ವದ್ದೀಕೆರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನುರಿತ ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಗುವುದು ಎಂದು ಸತ್ಯಮೇವ ಜಯತೆ ಯುವ ಶಕ್ತಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಓ.ಪ್ರತಾಪ್ಜೋಗಿ ತಿಳಿಸಿದ್ದಾರೆ.
ಚಿಕಿತ್ಸಾ ಸೌಲಭ್ಯಗಳು: ಉಚಿತ ಆರೋಗ್ಯ ಶಿಬಿರದಲ್ಲಿ ಸರ್ಜನ್ ಬಿ.ಪಿ (ರಕ್ತದೊತ್ತಡ ತಪಾಸಣೆ) ಸಕ್ಕರೆ ಕಾಯಿಲೆ (ಶುಗರ್ ತಪಾಸಣೆ), ಮೂಳೆ, ಕಣ್ಣಿನ ತಪಾಸಣೆ, ಮಕ್ಕಳ ತಜ್ಞರು, ಚರ್ಮ, ಕಿವಿ, ಮೂಗು, ಸ್ತ್ರೀ ರೋಗ ತಜ್ಞರು, ಹೃದಯ ರೋಗ ತಪಾಸಣೆ, ನರರೋಗ ತಪಾಸಣೆ, ಮೂತ್ರಕೋಶ ಮತ್ತು ಮೂತ್ರಪಿಂಡ (ಕಿಡ್ನಿ) ರೋಗಗಳ ತಪಾಸಣೆ ಮಾಡಲಾಗುತ್ತದೆ.
ಈ ಶಿಬಿರದಲ್ಲಿ ನುರಿತ ವೈದ್ಯರ ತಂಡವು ಆಗಮಿಸಲಿರುವುದರಿಂದ ಸಾಮಾನ್ಯ ಜನರು, ವೃದ್ಧರು ಮಕ್ಕಳು ಸಹ ಉಚಿತವಾಗಿ ಚಿಕಿತ್ಸೆ ಪಡೆದು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಅವರು ವಿನಂತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9986774522 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.