i
ಹಿರಿಯೂರು ಕಾಂಗ್ರೆಸ್ ನಲ್ಲಿ ಮುಗಿಯದ ಗೊಂದಲ, ಟಿಕೆಟ್ ಆಕಾಂಕ್ಷಿ ಸೋಮಶೇಖರ್ ಬಿರುಸಿನ ಪ್ರಚಾರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ ಹಾಗೂ ಕೈ ನಾಯಕ ಬಿ.ಸೋಮಶೇಖರ್ ಅವರ ನೆಡೆ ಅತ್ಯಂತ ಕುತೂಹಲ ಮೂಡಿಸಿದೆ.
ಕಳೆದ ನಾಲ್ಕೈದು ದಿನಗಳಿಂದೆ ಹತ್ತಾರು ಸಾವಿರಕ್ಕೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಿದ್ದ ಸೋಮಶೇಖರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎನ್ನುವ ಉತ್ಸಾಹದಲ್ಲಿರುವ ಅವರು ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿ ಸೋಮಶೇಖರ್, ಆದರೆ ಈಗಾಗಲೇ ಮೊದಲ ಕಾಂಗ್ರೆಸ್ ಪಟ್ಟಿಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಅವರ ಹೆಸರು ಅಂತಿಮ ಮಾಡಲಾಗಿದ್ದು ಸುಧಾಕರ್ ಕೂಡಾ ಕ್ಷೇತ್ರದಲ್ಲಿ ನಾನಾ ರೀತಿಯ ಅಬ್ಬರ ಪ್ರಚಾರ ಮಾಡುತ್ತಿದ್ದಾರೆ.
ಇವರಿಗೆ ಸೆಡ್ಡೊಡೆದಂತೆ ಬಿ.ಸೋಮಶೇಖರ್ ಕೂಡಾ ಕ್ಷೇತ್ರದ ವಿವಿಧ ಊರು ಕೇರಿಗಳಿಗೆ ಪ್ರತಿ ನಿತ್ಯ ನೀಡುತ್ತಿದ್ದು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ತಾಲ್ಲೂಕಿನ ಆರನಕಟ್ಟೆ, ಆದಿವಾಲ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ಸೋಮಶೇಖರ್ ಪ್ರಚಾರ ಕೈಗೊಂಡು ಕಾಂಗ್ರೆಸ್ ಕಾರ್ಯಕರ್ತರಲ್ಲಿ ದೊಡ್ಡ ಮಟ್ಟದಲ್ಲಿ ಗೊಂದಲ ಸೃಷ್ಠಿ ಆಗುತ್ತಿದೆ. ಆದರೆ ಸೋಮಶೇಖರ್ ಮಾತ್ರ ಅತ್ಯಂತ ಶಾಂತ ರೀತಿಯಲ್ಲಿ ಕಾಂಗ್ರೆಸ್ ಇನ್ನೂ ಯಾರಿಗೂ ಬಿ ಫಾರಂ ನೀಡಿಲ್ಲ ಎನ್ನುತ್ತಲೇ ತನ್ನ ರಾಜಕೀಯ ನೆಲೆ ಗಟ್ಟಿ ಮಾಡಿಕೊಳ್ಳುತ್ತಿದ್ದು ಅವರ ಮುಂದಿನ ನೆಡೆಗಾಗಿ ಅಭಿಮಾನಿಗಳು, ಕಾರ್ಯಕರ್ತರು ಕಾಯುತ್ತಿದ್ದಾರೆ.