i
ಪಿಎಚ್ ಡಿ ಅಧ್ಯಯನ ಮಾಡಲು ತೆರಳಿದ ವಾರ್ತಾ ಇಲಾಖೆ ನಿಕಟಪೂರ್ವ ಆಯುಕ್ತ ಚಿತ್ರದುರ್ಗದ ಡಾ.ಹರ್ಷ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾರ್ತಾ ಇಲಾಖೆಯ ಆಯುಕ್ತರಾಗಿದ್ದ ಚಿತ್ರದುರ್ಗದ ಐಪಿಎಸ್ ಅಧಿಕಾರಿ ಡಾ.ಹರ್ಷ ಪಿಎಸ್ ಅವರು ಹೆಚ್ಚಿನ ವ್ಯಾಸಂಗಕ್ಕಾಗಿ ರಜೆ ಪಡೆದು ಪಿಹೆಚ್ ಡಿ ಅಧ್ಯಯನ ಮಾಡುವುದಕ್ಕಾಗಿ ತೆರಳಿದ್ದಾರೆ ಎನ್ನಲಾಗಿದೆ.
ಐಪಿಎಸ್ ಅಧಿಕಾರಿ ಡಾ.ಹರ್ಷ ಪಿಎಸ್ ಅವರು, ಸಂಶೋಧನಾ ವ್ಯಾಸಂಗಕ್ಕಾಗಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ದಿನಾಂಕ 30-03-2023ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಐಪಿಎಸ್ ಅಧಿಕಾರಿ ಡಾ.ಹರ್ಷ ಪಿಎಸ್ ಅವರು ವೈಲ್ಡ್ ಲೈಫ್ ಸ್ಟಡೀಸ್ ನಲ್ಲಿ ಪಿ ಹೆಚ್ ಡಿ ವ್ಯಾಸಂಗಕ್ಕಾಗಿ ಅನುಮತಿ ಪಡೆದಿದ್ದಾರೆ. ದಿನಾಂಕ 20-03-2023ರಂದ ಜಾರಿಗೆ ಬರುವಂತೆ ಮೂರು ವರ್ಷಗಳ ಪುಲ್ ಟೈಮ್ ಬೇಸ್ ಅಡಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಹೆಚ್ ಡಿ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿ ಅವಕಾಶ ನೀಡಿದೆ.
ಕುವೆಂಪು ವಿವಿಯ ಡಿಪಾರ್ಟಮೆಂಟ್ ಆಫ್ ವೈಲ್ಡ್ ಲೈಫ್ ಮತ್ತು ಮ್ಯಾನೇಜ್ಮೆಂಟ್ ನ ಪ್ರೊಫೇಸರ್ ಹಾಗೂ ಚೈರ್ಮನ್ ಡಾ.ವಿಜಯ ಕುಮಾರ್ ಮಾರ್ಗದರ್ಶನದಲ್ಲಿ A Study on Stability of Tiger Populations in Projected Areas of South Karnataka, With Specific Focus on the Protected Zone and the Surrounding Areas, in Relation with Human Wildlife Conflicts ಎಂಬ ವಿಷಯದ ಮೇಲೆ ಡಾ.ಹರ್ಷ ಪಿಹೆಚ್ ಡಿ ವ್ಯಾಸಂಗ ಮಾಡಲಿದ್ದಾರೆ ಎನ್ನಲಾಗಿದೆ.