i
ಮತದಾರರಿಗೆ ಹಣ, ಮದ್ಯ ಹಾಗೂ ವಸ್ತುಗಳ ಹಂಚಿಕೆ ತಡೆಗೆ ಆದೇಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಹಣ,ಮದ್ಯ ಹಾಗೂ ವಸ್ತುಗಳನ್ನು ಹಂಚಿ ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು .ಜೆ.ಆರ್.ಜೆ. ಆದೇಶ ಹೊರಡಿಸಿದ್ದಾರೆ.
ಇದರ ಅನ್ವಯ ಯಾವುದೇ ವ್ಯಕ್ತಿಗಳು ಹಣ ಅಥವಾ ಲಂಚ ನೀಡಬಾರದು. ಸರಕು, ಬೆಲೆ ಬಾಳುವ ವಸ್ತುಗಳು, ಉಡುಗರೆ ಚೀಟಿಗಳು, ಸಿಮ್ ಕಾರ್ಡ್ ಬಾಕಿ ಪಾವತಿ, ಪ್ರಯಾಣ ವ್ಯವಸ್ಥೆ, ಆಹಾರ, ಮದ್ಯ ಅಥವಾ ಇತರೇ ಪಾನೀಯಗಳು, ಇಂದನ, ಉಚಿತ ಅಥವಾ ಸಬ್ಸಡಿ, ಬಹುಮಾನ ಸೇರಿದಂತೆ ಚುನಾವಣೆ ಹಕ್ಕನ್ನು ಪ್ರೇರಿಪಿಸುವ ವಸ್ತುಗಳನ್ನು ನೀಡಲು ಬಾರದು, ಪಡೆಯಲು ಬಾರದು. ನಿಷೇಧಿತ ವಸುಗಳನ್ನು ಸಂಗ್ರಹಿಸುವುದು, ಸಾಗಣಿಕೆ ಹಾಗೂ ಹಂಚುವುದು ಮಾಡಬಾರದು. ಈ ಕಾರ್ಯಗಳಿಗೆ ಸಹಾಯ ನೀಡಬಾರದು. ಇಂತಹ ಘಟನೆಗಳು ಕಂಡುಬAದರೆ ಚುನಾವಣೆ ನಿಮಿತ್ತ ನೇಮಿಸಲಾಗಿರುವ ಸ್ಥಿರ,ಸಂಚಾರಿ,ವೀಡಿಯೋ ಕಣ್ಗಾವಲು ತಂಡಗಳಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ದಾಖಲೆ ಇಲ್ಲದ 50,000 ಕ್ಕಿಂತ ಹೆಚ್ಚಿನ ನಗದು ಕೊಂಡೊಯ್ಯುವ ಹಾಗಿಲ್ಲ. ಚುನಾವಣೆಯಲ್ಲಿ ಹಣ ಮದ್ಯ ಹಾಗೂ ವಸ್ತುಗಳ ಹಂಚಿಕೆ ತಡೆಯಲು ಕಾರ್ಯನಿರ್ವಹಿಸುವ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು. ಇಲ್ಲವಾದರೆ ಇಂತಹ ಕೃತ್ಯಗಳನ್ನು ಅಪರಾಧ ಎಂದು ಭಾವಿಸಿ ಭಾರತೀಯ ದಂಡ ಸಂಹಿತೆ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆ ಗುರಿ ಪಡಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.