i
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗೆ ಜನ ಮೋಸ ಹೋಗಬಾರದು…
ಚಂದ್ರವಳ್ಳಿ ನ್ಯೂಸ್, ಯಲಬುರ್ಗಾ:
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗೆ ಜನ ಮೋಸ ಹೋಗಬಾರದು, ಗ್ಯಾರಂಟಿ ಕಾರ್ಡ್ ಹಿಡಿದು ಜನರ ಮನೆ ಮನೆಗೆ ಹೋಗಿ ಕಾರ್ಡ್ ನೀಡುವ ಕೊಡುವ ಮೂಲಕ ಮತ ಕೇಳುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಜಿಪಂ ವ್ಯಾಪ್ತಿಯಲ್ಲಿ ಚಿಕ್ಕವಂಕಲಕುಂಟಾ, ತಾಳಕೇರಿ, ಗಾಣದಾಳ, ಸೇರಿದಂತೆ ನಾನಾ ಗ್ರಾಮಗಳಲ್ಲಿ ವಿಧಾನಸಭಾ ಚುನಾವಣಾ ನಿಮಿತ್ಯ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದಲ್ಲಿ 5 ವರ್ಷ ಆಡಳಿತ ಮಾಡಿದ ಅವರು ಏನನ್ನೂ ಕೊಡಲಿಲ್ಲ, ಅದಕ್ಕಾಗಿ ಅವರು ಮನೆಗೆ ಹೋದರು, ಈಗ ಮತ್ತೆ ಪೊಳ್ಳು ಭರವಸೆ ಮೂಲಕ ಕಾರ್ಡ್ ನೀಡಿ ಕಾಂಗ್ರೆಸ್ಸಿಗೆ ಮತಹಾಕಿ ಎಂದು ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಗೆ ಸೇರ್ಪಡೆ: ಸಿಡ್ಲಬಾವಿ, ಗಾಣದಾಳ, ತಾಳಕೇರಿ ಗ್ರಾಮಗಳಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷವನ್ನು ತೊರೆದು ಸಾಕಷ್ಟುಕಾರ್ಯಕರ್ತರು ಸಚಿವ ಹಾಲಪ್ಪ ಆಚಾರ ಸಮ್ಮುಖದಲ್ಲಿ ಬಿಜೆಪಿ ಸೇರ್ಪೆಡೆಗೊಂಡರು.