i
ಜೆಡಿಎಸ್ 2ನೇ ಪಟ್ಟಿ ಬಿಡುಗಡೆ, ಕಾಂಗ್ರೆಸ್-ಬಿಜೆಪಿ ಮುಖಂಡರಿಗೆ ಮಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಗ್ಗಂಟಾಗಿದ್ದ ಹಾಸನ, ಹಿರಿಯೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ವಿವಿಧ 49 ಕ್ಷೇತ್ರಗಳಿಗೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿದೆ.
ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಮುಖಂಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು.
ಜೆಡಿಎಸ್ ಕೇಂದ್ರ ಕಚೇರಿ ಜೆಪಿಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ರಘು ಆಚಾರ್ ಅವರು ಕಾಂಗ್ರೆಸ್ ತೊರೆದು ತಮ್ಮ ಬೆಂಬಲಿಗ ರೊಂದಿಗೆ ಜೆಡಿಎಸ್ ಸೇರಿದರು. ಹಾಗೆಯೇ ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಶಹಾಪುರ ಕ್ಷೇತ್ರದ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಅವರು ಬಿಜೆಪಿ ತೊರೆದು ತಮ್ಮ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದರು.
ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಅಭ್ಯರ್ಥಿಗಳ 2ನೇ ಪಟ್ಟಿ
ಕುಡುಚಿ – ಆನಂದ್ ಮಾಳಗಿ
ರಾಯಭಾಗ ಎಸ್ಟಿ ಕ್ಷೇತ್ರ – ಪ್ರದೀಪ್ ಮಾಳಗಿ
ಸವದತ್ತಿ – ಸೌರಬ್ ಆನಂದ್ ಚೌಧ್ರ
ಅಥಣಿ- ಪೂಜ್ಯ ಶಶಿಕಾಂತ್ ಪಡಸಲಗಿ ಗುರುಗಳು
ಕಲಬುರ್ಗಿ ಉತ್ತರ – ನಾಸೀರ್ ಹುಸೇನ್ ಉಸ್ತಾದ್
ಬಳ್ಳಾರಿ ನಗರ – ಅಲ್ಲಾ ಭಕ್ಷ್
ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ – ಪರಮೇಶ್ವರಪ್ಪ
ಹರಪ್ಪನಹಳ್ಳಿ – ಎಂ ಎನ್ ನೂರ್ ಅಹ್ಮದ್
ಸಿರಗುಪ್ಪ ಎಸ್ಟಿ – ಪರಮೇಶ್ವರ್ ನಾಯಕ್
ಕಂಪ್ಲಿ ಎಸ್ಟಿ – ರಾಜಾನಾಯಕ್
ಕೊಳ್ಳೇಗಾಲ ಎಸ್ಸಿ – ಪುಟ್ಟಸ್ವಾಮಿ
ಗುಂಡ್ಲುಪೇಟೆ – ಕಡಬೂರು ಮಂಜುನಾಥ್
ಕಾಪೂ- ಕು.ಸಬೀನಾ ಸಮಥ್
ಕಾರ್ಕಳ-ಶ್ರೀಕಾಂತ್ ಕೊಚ್ಚು
ಉಡುಪಿ – ದಕ್ಷತ್ ಆರ್ ಶೆಟ್ಟಿ
ಬೆಂದೂರು – ಮನ್ಸೂರ್ ಇಬ್ರಾಹಿಂ
ಕುಂದಾಪುರ – ರಮೇಶ್ ಕುಂದಾಪುರ
ಕನಕಪುರ – ನಾಗರಾಜ್
ಯಲಹಂಕ – ಎಂ.ಮುನೇಗೌಡ
ಸರ್ವಜ್ಞನಗರ – ಮೊಹಮ್ಮದ್ ಮುಸ್ತಾಫ್
ಯಶವಂತಪುರ – ಜವರೇಗೌಡ
ಪುತ್ತೂರು – ಶಾಂತಕುಮಾರ್
ಶಿರಾ-ಆರ್ ರುದ್ರೇಶ್
ಸಿಂದಗಿ- ಶ್ರಿಮತಿ ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್ ಆರ್ ಚೆನ್ನಕೇಶವ
ಹೆಚ್ ಡಿ ಕೋಟೆ- ಜಯಪ್ರಕಾಶ್ ಸಿ
ಜೇವರ್ಗಿ – ದೊಡ್ಡಪ್ಪ ಗೌಡ ಶಿವಲಿಂಗಪ್ಪಗೌಡ
ಶಾ ಪುರ – ಗುರುಲಿಂಗಪ್ಪ ಗೌಡ
ಕಾರವಾರ – ಚೈತ್ರ ಕೋಟಾಕಾರ್
ಪುತ್ತೂರು – ದಿವ್ಯಪ್ರಭಾ
ಕಡೂರು – ವೈಎಸ್ ವಿ ದತ್ತಾ
ಹೊಳೇನರಸೀಪುರ – ಹೆಚ್ ಡಿ ರೇವಣ್ಣ
ಬೇಲೂರು -ಕೆಎಸ್ ಲಿಂಗೇಶ್
ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
ಅರಕಲಗೂಡು – ಎ ಮಂಜು
ಶ್ರವಣಬೆಳಗೋಳ – ಸಿಎನ್ ಬಾಲಕೃಷ್ಣ
ಮಹಾಲಕ್ಷ್ಮೀಲೇಔಟ್ – ರಾಜಣ್ಣ
ಹಿರಿಯೂರು – ರವೀಂದ್ರಪ್ಪ
ಮಾಯಕೊಂಡ ಎಸ್ಸಿ – ಆನಂದಪ್ಪ
ಯಲ್ಲಾಪುರ- ಡಾ.ನಾಗೇಶ್ ನಾಯಕ್
ಹಾಸನ- ಸ್ವರೂಪ್ ಪ್ರಕಾಶ್
ಕುಮಾರಸ್ವಾಮಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು, ಹಾಸನ ಕ್ಷೇತ್ರದ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಎಲ್ಲವೂ ಗೊತ್ತಿದೆ. ಕಳೆದ ಎರಡು ವರ್ಷಗಳಿಂದ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ನಿಲ್ಲಬೇಕು ಅಂತ ಪ್ರಯತ್ನಿಸಿದರು ಎಂದರು. ಹಾಸನದಲ್ಲಿ ಜೆಡಿಎಸ್ ಪಕ್ಷ ಒಡೆಯಬೇಕು ಎನ್ನುವ ಪ್ರಯತ್ನ ನಡೆಯುತ್ತಿತ್ತು. ಆದರೆ ಅದು ಯಾವುದು ಸಾಧ್ಯವಾಗಲಿಲ್ಲ. ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ಕಾರ್ಯಕರ್ತ ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಹಾಸನದಲ್ಲಿ ಬಹುತೇಕ ಗೊಂದಲ ನಿವಾರಣೆಯಾಗಿದೆ.