i
ಲಿಂಗಾಯತರೆಲ್ಲರೂ ಭ್ರಷ್ಟರೆಂದು ಸಿದ್ದರಾಮಯ್ಯ ಅವರಿಂದ ಅವಮಾನ-ರಾಜೀವ್ ಚಂದ್ರಶೇಖರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರೆಲ್ಲರೂ ಭ್ರಷ್ಟರು ಎನ್ನುವ ಅರ್ಥದಲ್ಲಿ ಮಾತನಾಡಿ ಇಡೀ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದು ಸರಿಯಲ್ಲ. ಸಮುದಾಯವೇ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಕಾಂಗ್ರೆಸ್ ನಿಂದನೆ, ಸುಳ್ಳು ಆರೋಪ-ಭರವಸೆ ಒಡೆದು ಆಳುವ ಮತ್ತು ತುಷ್ಟೀಕರಣದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವರನ್ನು ಟೀಕಿಸುವ ಭರದಲ್ಲಿ ಲಿಂಗಾಯತ ಸಮುದಾಯವನ್ನೇ ಅವಮಾನಿಸುವ ರೀತಿ ಮಾತನಾಡಿರುವುದೂ ಒಂದು ನಿದರ್ಶನ ಎಂದು ಬೇಸರ ವ್ಯಕ್ತ ಪಡಿಸಿದರು.
ಸಿದ್ದರಾಮಯ್ಯನವರು ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದಲ್ಲದೆ ಲಿಂಗಾಯತರನ್ನು ಒಡೆದು ಆಳುವ ಪ್ರಯತ್ನ ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯ ಒಡೆಯುವ ಪ್ರಯತ್ನ ಮಾಡಿ ತಕ್ಕ ಪ್ರತಿಫಲ ಪಡೆದಿದ್ದರು. ಈಗ ಮತ್ತದೇ ಪ್ರಯತ್ನ ಮಾಡಿದ್ದಾರೆಂದು ವಾಗ್ದಾಳಿ ಮಾಡಿದರು.
ಇಂತಹ ವರ್ತನೆ, ನಡವಳಿಕೆ ತೋರುವ ಪಕ್ಷದವರಿಗೆ ಅಧಿಕಾರ ನೀಡಿದಂತೆ ಜನರೇ ಯೋಚಿಸಬೇಕು ಎಂದು ಕರೆ ನೀಡಿದರು.