i
ಕಾಡುಗೊಲ್ಲ ಹೆಣ್ಣು ಮಗಳನ್ನು ನಗರಸಭೆ ಅಧ್ಯಕ್ಷೆಯಾಗಿ ಮಾಡಿ ರಾಜಕೀಯ ಪ್ರತಿನಿತ್ಯ ನೀಡಿದ್ದೇನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ ಅಲೆಮಾರಿ ಪಟ್ಟಿಯಲ್ಲಿ ಸಾಕಷ್ಟು ಮನೆಗಳನ್ನು ಮಂಜೂರು ಮಾಡಿ ಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ಹೇಳಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಬಾಲೆನಹಳ್ಳಿ ಗ್ರಾಮದಲ್ಲಿ ಮತಪ್ರಚಾರ ಕೈಗೊಂಡು ಮಾತಾನಾಡಿದರು. ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಅನೇಕ ಸಾಲ ಸೌಲಭ್ಯ ನೀಡಿದ್ದೇನೆ. ಈ ಗ್ರಾಮದ ಹೆಣ್ಣು ಮಗಳನ್ನು ನಗರಸಭೆ ಅಧ್ಯಕ್ಷೆಯಾಗಿ ಮಾಡಿದ್ದೇನೆ ಗ್ರಾಮಕ್ಕೆ ಶುದ್ಧ ಕುಡಿಯುವ ಘಟಕ. ಮಹಿಳಾ ಭವನ. ದೇವಸ್ಥಾನ ಅಡುಗೆ ಶಾಲೆಗೆ ಧನ ಸಹಾಯ ಮಾಡಿದ್ದೇನೆ ಸಿ. ಸಿ ರಸ್ತೆ ಶಾಲಾ ಕಾಂಪೌಂಡ್ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಹಲವು ರೈತರಿಗೆ ಸಹಾಯ ಮಾಡಿದ್ದೇನೆ ಗ್ರಾಮದ ಕುಡಿಯುವ ನೀರಿಗಾಗಿ ಬೋರ್ವೆಲ್ ಕೋರಿಸಿ ಕೊಟ್ಟಿದ್ದೇನೆ ನಿಮ್ಮ ಗ್ರಾಮದ ಎಸ್ಸಿ, ಎಸ್ಟಿ ಕಾಲೋನಿ ಗೆ ಸಿಸಿ ರಸ್ತೆ ಮಾಡಿಸಿದ್ದೇನೆ ಕಾಡುಗೊಲ್ಲರಿಗೆ ರಾಜಕೀಯ ಪ್ರತಿನಿತ್ಯ ನೀಡಿದ್ದೇನೆ. ಹೀಗೆ ಕಾಡುಗೊಲ್ಲರ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ಗ್ರಾಮಕ್ಕೆ ಬಂದಾಗ ಗ್ರಾಮದಲ್ಲಿ ಪಟಾಕಿ ಸಿಡಿಸಿ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗುಡಿ ಗೌಡ್ರು ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್, ಕೃಷ್ಣ ಮೂರ್ತಿ, ಜಗಣ್ಣ, ಹಾಲಿನ ಮೂರ್ತಪ್ಪ, ನಗರಸಭೆ ಮಾಜಿ ಅಧ್ಯಕ್ಷ ಶಿವರಂಜಿನಿ.ಡಿ, ಸಿ.ನಾಗರಾಜ್, ವೆಂಕಟೇಶ್ ಗೌಡ, ಬಿ ಆರ್. ಸಿದ್ದೇಶ್, ವಕೀಲ ರಂಗಸ್ವಾಮಿ, ಪ್ರಭು ಯಾದವ್, ಮಹೇಶ್, ಪಾಂಡು, ಯಜಮಾನ ಉಮೇಶ್, ಶಂಕರಣ್ಣ, ಊರಿನ ಯುವಕರು ಮುಖಂಡರು ಕಾಡುಗೊಲ್ಲ ಮುಖಂಡರು ಉಪಸ್ಥಿತರಿದ್ದರು.