i
ಚಳ್ಳಕೆರೆ ಕ್ಷೇತ್ರದ ಮತದಾರರ ವಿಶ್ವಾಸ ಅಚಲವಾಗಿದ್ದು ಗೆಲುವು ನನ್ನದೆ: ಟಿ.ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
-೨೮ ಚಳ್ಳಕೆರೆ ಕ್ಷೇತ್ರದ ಮತದಾರರ ಅಂತರಂಗದಲ್ಲಿ ನನ್ನ ಅವಧಿಯಲ್ಲಿ ಆದ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ. ನಾನು ಜನರ ಸೇವೆಗಾಗಿ ಸರ್ಕಾರಿ ನೌಕರಿಯನ್ನು ತ್ಯಜಿಸಿ ರಾeಕೀಯ ಪ್ರವೇಶಿಸಿದ್ದು, ಸಾರ್ಥಕವೆನ್ನಿಸಿದೆ. ಕಾರಣ ಕಳೆದ ಎರಡೂ ಅವಧಿಯಲ್ಲೂ ಈ ಕ್ಷೇತ್ರದ ಜನರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಮತದಾರ ನೀಡಿದ್ದು, ಅದು ಈ ಬಾರಿಯೂ ಮುಂದುವರೆಯಲಿದೆ ಎಂಬ ವಿಶ್ವಾಸ ನನ್ನದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ಮೀರಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಡಲನಕುಂಟೆ, ರಂಗವ್ವನಹಳ್ಳಿ, ಕರೀಕೆರೆ, ಮೀರಸಾಬಿಹಳ್ಳಿ ಮುಂತಾದ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮೀಣ ಭಾಗದ ಯಾವುದೇ ಪ್ರವೇಶಕ್ಕೆ ಹೋದರೂ ನನ್ನ ಅಭಿವೃದ್ದಿ ಕಾಮಗಾರಿಗಳೇ ಕಾಣುತ್ತಿವೆ. ಸಾರ್ವಜನಿಕರೂ ಸಹ ಈ ಬಗ್ಗೆ ಹೆಮ್ಮೆ ಇಂದ ಅವರ ಗ್ರಾಮಗಳಲ್ಲಿ ಆದ ಕಾಮಗಾರಿಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸುತ್ತಿದ್ಧಾರೆ. ಮತದಾರರ ವಿಶ್ವಾಸಕ್ಕೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸಿರುವೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ರವಿಕುಮಾರ್, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಗೀತಾನಂದಿನಿಗೌಡ, ಹೋಟೆಲ್ ಮಾಲೀಕ ದೊಣಪ್ಪರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಸಿ.ಎಂ.ಶಿವಕುಮಾರಸ್ವಾಮಿ, ಮೀರಸಾಬಿಹಳ್ಳಿ ಜಯರಾಂ, ರಂಗಸ್ವಾಮಿ, ಟಿ.ಗಿರಿಯಪ್ಪ, ಗದ್ದಿಗೆ ತಿಪ್ಪೇಸ್ವಾಮಿ, ಗೀತಾಬಾಯಿ, ವಾಣಿ, ಸೈಪುಲ್ಲಾ, ಹನುಮಂತಪ್ಪ, ಚೆಟ್ಟೆಕಂಬಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.