i
ಬಿಜೆಪಿ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು ಬಿಜೆಪಿ ಬಿಟ್ಟು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಚಿಂಚೋಳಿ:
ತಾಲೂಕಿನ ತುಮಕುಂಟಾ ಗ್ರಾಮದ ಬಿಜೆಪಿ ಯುವ ಮುಖಂಡರು ಹಾಗೂ ಹಾಲಿ & ಮಾಜಿ ಗ್ರಾಮ ಪಂಚಾಯತ ಸದ್ಯಸರುಗಳು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಃಗಳನ್ನು, ಶ್ರೀ ಸುಭಾಷ್ ವ್ಹಿ. ರಾಠೋಡ ಜೀ ರವರ ನಾಯಕತ್ವದ ಗುಣವನ್ನು ಮೆಚ್ಚಿ, ಬಿಜೆಪಿಯ ದೂರಾಡಳಿತವನ್ನು ತೊಲಗಿಸಲು, ಚಿಂಚೋಳಿಯಲ್ಲಿ ಬದಲಾವಣೆ ಬಯಸಿ, ಬಿಜೆಪಿ ಪಕ್ಷವನ್ನು ತೊರೆದು, ಚಿಂಚೋಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸನ್ಮಾನ್ಯ ಶ್ರೀ ಸುಭಾಷ್ ವ್ಹಿ. ರಾಠೋಡ ಜೀ ರವರ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ, ಚಿಂಚೋಳಿ ಅಧ್ಯಕ್ಷರಾದ ಶ್ರೀ ಬಸವರಾಜ ಆರ್. ಮಲಿ ರವರ ನೇತೃತ್ವದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರು ಗ್ರಾಮ ಪಂಚಾಯತ ಸದ್ಯಸರಾದ ರಾಜಶೇಖರ ದಂಡಿನ, ಗ್ರಾಮ ಪಂಚಾಯತ ಮಾಜಿ ಸದಸ್ಯರು ಸೂರ್ಯಕಾಂತ ಹಲಗಿ, ನಿರಂಕಾರ ಪ್ಯಾರಬದ್ದಿ, ಗುಂಡಪ್ಪ ಗೋಣಿ, ನಾಗಮೂರ್ತಿ ಪಂಚಾಳ, ಶಶಿಕುಮಾರ ರಾಗಾ,ಮಲ್ಲಪ್ಪ ಪೂಜಾರಿ, ಷರೀಫ್ ಪಟೇಲ್, ಪ್ರಭು ಮೇತ್ರಿ, ಹನಮಂತ ಪೂಜಾರಿ, ಸಲಾಂ ಪಟೇಲ್ ಹಾಗೂ ಹಲವಾರು ಬಿಜೆಪಿ ಮುಖಂಡರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಜಗನಾಥ ಕಟ್ಟಿ, ಅಜೀತ್ ಪಾಟೀಲ್, ಅಬ್ದುಲ್ ಬಾಸಿದ ಸಾಬ್, ಸಂತೋಷ್ ಗುತ್ತೇದಾರ, ಜಗನಾಥ ಗುತ್ತೇದಾರ, ಖಲಿಲ್ ಪಟೇಲ್, ಮಲ್ಲಿಕಾರ್ಜುನ ಕೋಟಪಲ್ಲಿ, ರವಿ ಪೂಜಾರಿ, ನರಸಪ್ಪ ಕಿವಣೊರ , ನಾಗಾರ್ಜುನ ಕಟ್ಟಿ, ಮಂಜುನಾಥ ಲೇವಡಿ, ಮಸೂದ್ ಸೌದಾಗಾರ, ಶಿವಕುಮಾರ ಸ್ವಾಮಿ, ಜಗನಾಥ ಹೊಸಮನಿ, ಅಯೂಬ್ ಖಾನ್, ಗುಂಡಯ್ಯ ಸ್ವಾಮಿ, ಶಿವಾಜಿ ಚವ್ಹಾಣ, ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.