i
ಮಾಯಸಂದ್ರ ಹುಚ್ಚವ್ವನಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯೂರು ತಾಲೂಕಿನ ಮಾಯಸಂದ್ರ, ಹುಚ್ಚವ್ವನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಂದ್ರಪ್ಪ ಬಿರುಸಿನ ಪ್ರಚಾರ ಕೈಗೊಂಡರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯ ಕ್ಷೇತ್ರವಾದ ಮೇಲೆ ಎರಡು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಧಾಕರ್ ಆಯ್ಕೆ ಮಾಡಿದ್ದೀರಿ, ನಂತರ ಒಂದು ಅವಧಿಗೆ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಗೆ ಆಯ್ಕೆ ಮಾಡಿದ್ದೀರಿ, ಒಮ್ಮೆ ಜೆಡಿಎಸ್ ಅಭ್ಯರ್ಥಿಯಾದ ರವೀಂದ್ರಪ್ಪ ಆದ ನನ್ನನ್ನು ಈ ಸಲ ಆಯ್ಕೆ ಮಾಡಿದರೆ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆಂದು ಭರವಸೆ ನೀಡಿದರು.
ಯಾವುದೇ ಜಾತಿ ಧರ್ಮ ನೋಡದೆ ಮತದಾರರು ಆಯ್ಕೆ ಮಾಡಿ ಕಳಿಸಿದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚು ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಯಸಂದ್ರ ಹುಚ್ಚವ್ವನಹಳ್ಳಿ ಗ್ರಾಮಗಳ ಮತದಾರರು ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರಿಗೆ ಕುಂಭ ಮೇಳೆದೊಂದಿಗೆ ಅದ್ಧೂರಿ ಸ್ವಾಗತ ಕೋರಿದರಲ್ಲದೆ ದೊಡ್ಡ ದೊಡ್ಡ ಗಾತ್ರದ ಹೂವಿನ ಹಾರ ಹಾಕಿ ಜೈಕಾರ ಕೂಗಿದರು. ಜೆಡಿಎಸ್ ನಾಯಕ ಕುಮಾರಣ್ಣನವರಿಗೆ ಜೈ, ಜೆಡಿಎಸ್ ಪಕ್ಷಕ್ಕೆ ಜೈ ಜೈ ಎಂದು ಜೈಕಾರ ಹಾಕಿ ಸಂಭ್ರಮಿಸಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ
ಎಂ. ರವೀಂದ್ರಪ್ಪ ಅವರ ಕೈ ಮತ್ತಷ್ಟು ಬಲಪಡಿಸಿದ ಹುಚ್ಚವ್ವನಹಳ್ಳಿ ಯುವ ಸಮೂಹ ಇಂದು ಆತ್ಮೀಯರಾದ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹೆಚ್.ಆರ್. ತಿಮ್ಮಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಚಂದ್ರಶೇಖರ್ ರವಿ ರಂಗನಾಥ್ ಇಂದು ಕಾಂಗ್ರೆಸ್ ಪಕ್ಷ ನೂರಾರು ಜನರು ತೊರೆದು ಜೆಡಿಎಸ್ ಸೇರ್ಪಡೆಯಾದರು…. ವೀರ ಜುಂಜಪ್ಪ ವಸಂತ ವೀರೇಂದ್ರ ಶ್ರೀಧರ ವೆಂಕಟೇಶ್ ದೇವರಾಜ್ ಕೆ.ಮೋಹನ್ ಹಾಲಪ್ಪ ಆರ್. ಸುಧಾಕರ್ ಸೋಮಣ್ಣ ಮಂಜುನಾಥ್ ಗೌರಮ್ಮ ಸೋಮು ಲಕ್ಷ್ಮೀದೇವಿ ಸೂರಿ ಗ್ರಾಮ ಪಂಚಾಯತಿ ಸದಸ್ಯರಾದ ಇಮಾಮ್ಬಕ್ಕ ಹಾಗೂ ಗ್ರಾಮಸ್ಥರು ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಕೆಲ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಎರಡು ಗ್ರಾಮಗಳ ಗ್ರಾಮಸ್ಥರು, ಮುಖಂಡರು, ಜೆಡಿಎಸ್ ಅಭಿಮಾನಿಗಳು ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.