i
ಈ ನೆಲದ ನಿಮ್ಮ ಮಗ ನಾನು, ಭೂಮಿ, ನೀರು, ಆಸ್ತಿ ರಕ್ಷಿಸುವ ಕಾರ್ಯ ಮಾಡುವೆ ಆಶೀರ್ವಾದಿಸಿ-ರವೀಂದ್ರಪ್ಪ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರು ದಾಸನಮಾಳಿಗೆ ಗ್ರಾಮದ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.
ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಎಂ.ರವೀಂದ್ರಪ್ಪ ಅವರನ್ನ ಸ್ವಾಗತಿಸಿ ಹಾಗೂ ಪ್ರಚಾರಕ್ಕೆ ಚಾಲನೆ ನೀಡಿದರು.
ನಂತರ ಮಾತಮಾಡಿ ರವೀಂದ್ರಪ್ಪ, ನಿಮ್ಮ ಮನೆಯ ಮಗ ನಾನು. ಎಂದೂ ನಿಮಗೆ ದ್ರೋಹ ಬಗೆಯುವ ಕಾರ್ಯ ಮಾಡುವುದಿಲ್ಲ, ಈ ಮಣ್ಣಿನ ನಂಟಿನಲ್ಲಿರುವ ನಾನು ಸದಾ ಭೂಮಿ, ನೀರು, ಆಸ್ತಿ ರಕ್ಷಿಸುವ ಕಾರ್ಯ ಮಾಡುವೆ ದಯವಿಟ್ಟು ಒಮ್ಮೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ನೀಡಿ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್ ಹನುಮಂತರಾಯಪ್ಪ, ಜೆಡಿಎಸ್ ಮುಖಂಡರಾದ ದ್ಯಾಮೇಗೌಡ, ಶಿವಣ್ಣ, ಶಾಂತರಾಜ್, ಕಾಂತರಾಜ್ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು.