i
ಕಾಂಗ್ರೆಸ್ ಗೆಲುವನ್ನು ಜನ ಹಬ್ಬದಂತೆ ಆಚರಿಸುತ್ತಿದ್ದಾರೆ-ಡಿ.ಕೆ.ಶಿವಕುಮಾರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನನ್ನ ಗೆಲುವು ಕನಕಪುರ ಜನರು ನೀಡಿದ ಮರೆಯಲಾರದ ಕೊಡುಗೆ. ಅಭೂತಪೂರ್ವ ಯಶಸ್ಸಿನ ನಂತರ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದೆ. ಕಾಂಗ್ರೆಸ್ ಗೆಲುವನ್ನು ಜನ ಹಬ್ಬದಂತೆ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅವರು ಟ್ವೀಟ್ ಮಾಡಿ ಮಾಹಿತಿ ನೀಡಿ, ಇದು ಕಾಂಗ್ರೆಸ್ ಗೆಲುವಲ್ಲ ಬದಲಾಗಿ ಕನ್ನಡಿಗರ ಗೆಲುವು. ಅವರ ಭರವಸೆಗಳ ಗೆಲುವು, ಒಳ್ಳೆಯ ನಾಳೆಗಳ ಗೆಲುವು. ದೈವದ ಅನುಗ್ರಹದಿಂದ ರಾಜ್ಯಾದ್ಯಂತ ಕಾಂಗ್ರೆಸ್ ಪ್ರಚಂಡ ಮುನ್ನಡೆ ಕಾಯ್ದುಕೊಂಡಿದ್ದು, ಇಂದು ನನ್ನ ನಿವಾಸದಲ್ಲಿ ದೇವರ ಆಶೀರ್ವಾದ ಪಡೆದೆ ಎಂದು ತಿಳಿಸಿದ್ದಾರೆ.