i
ಸಿಎಂ ಹುದ್ದೆ ನೀಡದಿದ್ದರೆ ಯಾವುದೇ ಹುದ್ದೆಗೆ ಒಪ್ಪಿಕೊಳ್ಳದಿರಲು ಡಿಕೆಶಿ ಮೇಲೆ ಆಪ್ತ ಶಾಸಕರ ಒತ್ತಡ!?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಿಎಲ್ಪಿ ಸಭೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಆಪ್ತ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಕರೆದಿದ್ದ ಸಭೆಯಲ್ಲಿ 60ಕ್ಕೂ ಹೆಚ್ಚಿನ ಸಂಖ್ಯೆಯ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದು ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಉಪ ಮುಖ್ಯಮಂತ್ರಿ ಸೇರಿದಂತೆ ಬೇರೆ ಯಾವುದೇ ಸಚಿವ ಸ್ಥಾನ ಒಪ್ಪಿಕೊಳ್ಳದಿರುವಂತೆ ಡಿಕೆಶಿ ಮೇಲೆ ಆಪ್ತ ಶಾಸಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಕೆಪಿಸಿಸಿ ಅಧ್ಯಕ್ಷರಾದರಿಗೆ ಸಿಎಂ ಹುದ್ದೆ ನೀಡಬೇಕು. ಇದಕ್ಕಾಗಿ ಬಿಗಿಪಟ್ಟು ಹಿಡಿದ ಬೆಂಬಲಿಗರು ಸಿಎಂ ಮಾಡದಿದ್ದರೆ ಸರ್ಕಾರದ ಭಾಗವಾಗಬೇಡಿ ಎಂದು ತಮ್ಮ ನಾಯಕನ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿ ಆದರೆ ನೀವೇ ಆಗಬೇಕು. ಇಲ್ಲದಿದ್ದರೆ ಬೇಡವೇಬೇಡ ಎಂದು ಶಾಸಕಾಂಗ ಸಭೆಗೂ ಮುನ್ನ ಬೆಂಬಲಿಗ ಶಾಸಕರು ಡಿಕೆಶಿ ಮುಂದೆ ಪಟ್ಟು ಹಿಡಿದಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.