i
ನೊಣವಿನಕೆರೆ ಅಜ್ಜಯ್ಯನವರ ಮಾತು ಕೇಳಿ ದಂಗಾದ ಡಿಕೆಶಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ನೊಣವಿನಕೆರೆ ಬಳಿಯ ಅಜ್ಜಯ್ಯ ಅಂದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಅಪಾರ ಭಕ್ತಿ, ಗೌರವ ಪ್ರೀತಿ. ಆದರೆ ಮುಂದಿನ ಸಿಎಂ ಆಯ್ಕೆ ಕುರಿತು ಅಜ್ಜಯ್ಯ ಹೇಳಿದಂತ ಮಾತು ಕೇಳಿ ಡಿಕೆ ಶಿವಕುಮಾರ್ ದಂಗಾಗಿದ್ದಾರೆ ಎನ್ನಲಾಗುತ್ತಿದೆ.
ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿರುವಂತ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅವರು, ಅಜ್ಜಯನಿಂದ ಹೇಳಿಕೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಸಿಎಂ ಆಗುವ ಬಗ್ಗೆ ಕೇಳಿದಾಗ ಆದರೆ ಈ ಬಾರಿ ಸಿಎಂ ಆಗ್ತೀರಿ. ಇಲ್ಲ ಅಂದ್ರೆ ಇಲ್ಲ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಅಜ್ಜಯ್ಯ ಅವರ ಮಾತನ್ನು ಕೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದಂಗು ಬಡಿದು ಹೋಗಿದ್ದಾರೆ ಎನ್ನಲಾಗುತ್ತಿದೆ. ಅಪಾರ ಗೌರವ ಇಟ್ಟಿರುವಂತ ಅಜ್ಜಯ ಹೇಳಿದಂತ ಮಾತಿನಿಂದಾಗಿ ಚಿಂತೆಗೆ ಒಳಗಾಗಿರುವ ಅವರು ಮುಂದೇನು ಮಾಡಬೇಕು ಎಂದು ಆಪ್ತರೊಂದಿಗೆ ಗಂಭೀರ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವರಿಷ್ಠರ ಬಳಿಯಲ್ಲಿ ತಮಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದು ಹೈಕಮಾಂಡ್ ಏನು ಮಾಡುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಇಂದು ಡಿಕೆಶಿ ದೆಹಲಿಗೆ ತೆರಳಲಿದ್ದು ಸಂಜೆ ಸೋನಿಯಾ ಗಾಂಧಿ, ಮಲ್ಲಿಕಾರ್ಜನ್ ಖರ್ಗೆ ಸೇರಿದಂತೆ ಮತ್ತಿತರ ವರಿಷ್ಠರೊಂದಿಗೆ ಮಾತುಕತೆ ಮಾಡುವ ಸಾಧ್ಯತೆ ಇದೆ. ಸಂಜೆ ವೇಳೆಗೆ ಮುಖ್ಯಮಂತ್ರಿಗಳ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.