i
ರೈಲುಗಳ ಸೇವೆಯಲ್ಲಿ ಬದಲಾವಣೆ, ರೈಲುಗಳ ಭಾಗಶಃ ರದ್ದು, ರೈಲು ಮಾರ್ಗ ಬದಲಾವಣೆ…
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ರಾಜ್ಯದ ಹಲವು ರೈಲ್ವೆ ಮಾರ್ಗಗಳಲ್ಲಿ ರೈಲುಗಳ ಓಡಾಟದಲ್ಲಿ ಬದಲಾವಣೆ ಆಗಿದ್ದು ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ
ಸಿಕಂದರಾಬಾದ್ ವಿಭಾಗದ ಚಿಂತಲಪಲ್ಲಿ ಮತ್ತು ನೆಕ್ಕೊಂಡ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.
ರೈಲುಗಳ ಭಾಗಶಃ ರದ್ದು:
1. ಮೇ 20 ರಿಂದ ಜೂನ್ 6 ರವರೆಗೆ ಬೆಳಗಾವಿಯಿಂದ ಹೊರಡುವ ರೈಲು ಸಂಖ್ಯೆ 07335 ಬೆಳಗಾವಿ-ಸಿಕಂದರಾಬಾದ್ ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಕಾಜಿಪೇಟ ಮತ್ತು ಮಣುಗೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
2. ಮೇ 21 ರಿಂದ ಜೂನ್ 7 ರವರೆಗೆ ಮಣುಗೂರು-ಬೆಳಗಾವಿ ಡೈಲಿ ಎಕ್ಸ್ಪ್ರೆಸ್ ವಿಶೇಷ (07336) ರೈಲನ್ನು ಮಣುಗೂರು ಮತ್ತು ಕಾಜಿಪೇಟ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ರೈಲು ಮಾರ್ಗ ಬದಲಾವಣೆ:
1. ಮೇ 21, 28 ಮತ್ತು ಜೂನ್ 4 ರಂದು ಯಶವಂತಪುರ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 18112 ಯಶವಂತಪುರ-ಟಾಟಾನಗರ ಎಕ್ಸ್ಪ್ರೆಸ್ ರೈಲು ಸಿಕಂದರಾಬಾದ್, ಪಗಿಡಿಪಲ್ಲಿ, ಗುಂಟೂರು ಮತ್ತು ವಿಜಯವಾಡ ನಿಲ್ದಾಣಗಳ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ವಾರಂಗಲ್ ಮತ್ತು ಖಮ್ಮಂ ನಿಲ್ದಾಣ ತಪ್ಪಲಿವೆ. ಬದಲಾದ ಮಾರ್ಗದಲ್ಲಿ ಸಂಚರಿಸುವುದರಿಂದ ಗುಂಟೂರು ನಿಲ್ದಾಣಕ್ಕೆ ತಾತ್ಕಾಲಿಕ ನಿಲುಗಡೆ ಒದಗಿಸಲಾಗಿದೆ ಎಂದು ಹುಬ್ಬಳ್ಳಿ ರೈಲ್ವೆ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನ್ನೇಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.