i
ಸಿದ್ದರಾಮಯ್ಯ ಸುಳ್ಳು ಭರವಸೆಗಳ ಸರ್ದಾರ -ಗೋವಿಂದ ಕಾರಜೋಳ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜನತೆಗೆ ಹೊಸ ಸರ್ಕಾರ ಪ್ರಾರಂಭದಲ್ಲಿಯೇ ಮಹಾಮೋಸ ಎಸಗಿದೆ. ಸಿದ್ದರಾಮಯ್ಯ ಸುಳ್ಳು ಭರವಸೆಗಳ ಸರ್ದಾರ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ವಾಗ್ದಾಳಿ ಮಾಡಿದ್ದಾರೆ.
ಅವರು ಟ್ವೀಟ್ ಮಾಡಿ ಮಾತನಾಡಿ, ಹೊಸ ಸಂಪನ್ಮೂಲ ಕ್ರೋಡೀಕರಣದ ನಿರೀಕ್ಷೆಯಲ್ಲಿ ತಾನು ನೀಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಣಯ ಕೇವಲ ಕಾಗದದ ಮೇಲಿನ ಘೋಷಣೆ ಯಾಗಬಾರದು. ಸಂಪನ್ಮೂಲ ಕ್ರೂಡೀಕರಣದ ಬಗ್ಗೆ ಯೋಚಿಸದೆ, ಭರವಸೆ ಈಡೇರಿಸದೆ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಚಿವ ಸಂಪುಟವು ಅದೇ ರೀತಿಯಾಗಿ ಘೋಷಣೆ ಮಾಡಿದರೆ ಭರವಸೆ ಅನುಷ್ಠಾನ ಮಾಡಿದಂತೆಯೇ?
ಕೇವಲ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಪೂರ್ವ ಸಿದ್ಧತೆ ಇಲ್ಲದೆ ಕೇವಲ ಮತ್ತೊಂದು ಕಾಗದ ಘೋಷಣಾ ಹುಲಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರ ಸುದ್ದಿಗೋಷ್ಠಿ ಕೇವಲ ಚುನಾವಣಾ ಭಾಷಣದಂತೆ ವರ್ಣ ರಂಜಿತವಾಗಿತ್ತು. ಸಂಪನ್ಮೂಲ ಕ್ರೂಡೀಕರಣ ಮತ್ತು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಸ್ಪಷ್ಟವಾದ ಮತ್ತು ಅನುಷ್ಠಾನಗೊಳಿಸ ಬಹುದಾದ ವಿಷಯಗಳನ್ನು ನಾಡಿನ ಜನತೆಯ ಮುಂದೆ ಇರಿಸಲಿ ಎಂದು ಗೋವಿಂದ್ ಕಾರಜೋಳ ತಾಕೀತು ಮಾಡಿದ್ದಾರೆ.