i
ರೇಷ್ಮೆ ಬೆಲೆ ಕುಸಿತ ತಡೆಯಲು ಖರೀದಿ ಹಾಗೂ ರೇಷ್ಮೆ ಒತ್ತೆ ಸಾಲ ಪ್ರಕ್ರಿಯೆ ಪ್ರಾರಂಭ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು ರೇಷ್ಮೆ ಬೆಲೆ ಕುಸಿತ ತಡೆಯುವ ಸಲುವಾಗಿ ಮೇ 30 ರಿಂದ ಖರೀದಿ ಶಾಖೆಗಳಾದ ಶಿಡ್ಲಘಟ್ಟ, ಬೆಂಗಳೂರು, ರಾಮನಗರ ಮತ್ತು ಕೊಳ್ಳೇಗಾಲ ಶಾಖೆಗಳಲ್ಲಿ ಖರೀದಿ ಹಾಗೂ ರೇಷ್ಮೆ ಒತ್ತೆ ಸಾಲ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ರಾಜ್ಯದ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮಂಡಳಿಯು ನಿಗಧಿಪಡಿಸಿರುವ ದರ ಹಾಗೂ ಗುಣಮಟ್ಟದ ಅನ್ವಯ ರೇಷ್ಮೆ ನೂಲು ಮಾರಾಟ ಮತ್ತು ರೇಷ್ಮೆ ಒತ್ತೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಖರೀದಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಹಾಗೂ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 080-22210314, 23420374 ಮತ್ತು 23120375 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.