![](https://www.chandravallinews.com/wp-content/uploads/2023/06/WhatsApp-Image-2023-06-03-at-10.16.18-AM-1.jpeg)
i
ಗುಂತಕಲ್-ಚಿಕ್ಕಜಾಜೂರು-ಗುಂತಕಲ್ ವಿಶೇಷ ರೈಲಿನ ಸೇವೆ ರದ್ದು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
17ನೇ ಜೂನ್ 2023 ರಿಂದ 28ನೇ ಜೂನ್ 2023 ರವರೆಗೆ 12 ದಿನಗಳ ಅವಧಿಗೆ ಗಾಡಿ ಸಂ.07586/07585 ಗುಂತಕಲ್ – ಚಿಕ್ಕಜಾಜೂರು- ಗುಂತಕಲ್ ವಿಶೇಷ ರೈಲಿನ ಸೇವೆ ರದ್ದಾಗಿದೆ ಎಂದು ಮೈಸೂರು ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಲೋಹಿತೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ರೈಲ್ವೆಯ ಹುಬ್ಬಳ್ಳಿ ವಿಭಾಗದ ಬಳ್ಳಾರಿ-ರಾಯದುರ್ಗ ಮತ್ತು ಹೊಸಪೇಟೆ-ವ್ಯಾಸ ಕಾಲೋನಿ ನಿಲ್ದಾಣಗಳ ನಡುವಿನ ಬಹುಮುಖ್ಯವಾದ ಸಿವಿಲ್ ಎಂಜಿನಿಯರಿಂಗ್ ಸುರಕ್ಷತಾ ಕಾರ್ಯಗಳನ್ನು 17.06.2023 ರಿಂದ 28.06.2023 ರವರೆಗೆ ಕೈಗೊಳ್ಳುತ್ತಿದ್ದೂ, ಈ ಕಾರಣಕ್ಕಾಗಿ ದಿನಾಂಕ 17.06.2023 ರಿಂದ 28.06.2023 ರವರೆಗೆ ಒಟ್ಟು 12 ದಿನಗಳ ಕಾಲ ರೈಲು ಗಾಡಿ ಸಂಖ್ಯೆ 07586 ಗುಂತಕಲ್-ಚಿಕ್ಕಜಾಜೂರು ವಿಶೇಷ ಎಕ್ಸ್ಪ್ರೆಸ್ ಮತ್ತು ರೈಲು ನಂ.07585 ಚಿಕ್ಕಜಾಜೂರು- ಗುಂತಕಲ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.