i
ಮಾಜಿ ಶಾಸಕಿ ಪೂರ್ಣಿಮಾ ಕುಮ್ಮಕ್ಕು, ಎಸ್ಟಿ ಸಮುದಾಯದ ಅನುದಾನ ದುರ್ಬಳಕೆ, ಕಠಿಣ ಶಿಕ್ಷೆಗೆ ಆಗ್ರಹ ಮಾಡಿದ ಶಿವರಂಜನಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಸ್ ಟಿ ಸಮುದಾಯದ ಅನುದಾನವನ್ನು ನಿಗದಿತ ಸ್ಥಳ ಬಿಟ್ಟು ಬೇರೆ ಕಡೆ ನಿರ್ವಹಿಸಿ ಎಸ್ಟಿ ಅನುದಾನ ದುರ್ಬಳಕೆ ಮಾಡಿಕೊಂಡು ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ನಗರಸಭಾ ಸದಸ್ಯೆ ಶಿವರಂಜನಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಹಿರಿಯೂರು ನಗರದ ಮೂರನೇ ವಾರ್ಡಿನಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ ವತಿಯಿಂದ TSP ಅನುದಾನದಲ್ಲಿ ಇಂಡೆಂಟ್ No. (VJNL/RD/WORK-INDENT 2523)ಈ ಕಾಮಗಾರಿಯನ್ನು ಹಿರಿಯೂರ್ ನಗರಸಭಾ ವಾರ್ಡ್ ನಂಬರ್ 03 ರ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಸದರಿ ಕಾಮಗಾರಿಯನ್ನು TSP ಅನುದಾನದ ಪ್ರಕಾರ ಎಸ್ ಟಿ ಸಮುದಾಯದ ಕಾಲೋನಿಯಲ್ಲಿ ನಿರ್ವಹಿಸಲು ಅನುಮೋದನೆ ನೀಡಿರುತ್ತಾರೆ. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಸದರಿ ಕಾಮಗಾರಿಕೆಯನ್ನು ಎಸ್. ಟಿ ಸಮುದಾಯ ಇಲ್ಲದೆ ಇರುವ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಿರ್ವಹಿಸುತ್ತಿದ್ದಾರೆ. ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪ್ರಭಾವ ಬಳಸಿ ತಮಗೆ ಬೇಕಾದವರ ಮನೆ ಮುಂದೆ ಕಾಮಗಾರಿಕೆ ನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ. ಹಾಗೂ ಕಾಮಗಾರಿ ಅಂದಾಜು ಪಟ್ಟಿಯ ಅನುಗುಣವಾಗಿ ಇರುವುದಿಲ್ಲ ತುಂಬಾ ಕಳಪೆ ಗುಣಮಟ್ಟದಾಗಿರುತ್ತದೆ ಆದುದರಿಂದ ಎಸ್.ಟಿ ಸಮುದಾಯದವರಿಗೆ ಅನ್ಯಾಯ ಹಾಗು ದೌರ್ಜನ್ಯ ಎಸಗಿದಂತಾಗಿತ್ತದೆ.
ಆದುದರಿಂದ ಸದರಿ ಕಾಮಗಾರಿಕೆಯನ್ನು ಕೂಡಲೆ ಸ್ಥಗಿತಗೊಳಿಸಿ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಸ್.ಟಿ ಸಮುದಾಯದವರಿಗೆ ನ್ಯಾಯ ಒದಗಿಸಿಕೊಡಲು ಕಾಮಗಾರಿಯ ಸಂಬಂಧಪಟ್ಟ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಮಾಜಿ ನಗರಸಭಾ ಅಧ್ಯಕ್ಷೆ ಹಾಲಿ ಸದಸ್ಯೆ ಎಸ್.ಶಿವರಂಜಿನಿ ಪತ್ರ ಬರೆದು ಒತ್ತಾಯಿಸಿದ್ದಾರೆ.