i
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಪೊಲೀಸ್ ಸಹಾಯವಾಣಿ 112 ಮತ್ತು 1098 ಸಂಖ್ಯೆಗೆ ಕರೆ ಮಾಡಿ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮೊಬೈಲ್ ಬಳಕೆ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕೆಂದು ಡಿಸಿಆರ್ಬಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ಹೇಳಿದರು.
ನಗರದ ಸೀತಮ್ಮ ಬಾಲಕಿಯರ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಕಾನೂನು ಮತ್ತು ಕಾಯ್ದೆ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಪೊಲೀಸ್ ಇಲಾಖೆಯ ಸಹಾಯವಾಣಿ 112, 1098 ಗೆ ಉಚಿತ ಕರೆ ಮಾಡಿದರೆ ತಕ್ಷಣವೇ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.
ಬಿಇಒ ಬಿ.ಎಂ.ದಾರುಕೇಶ್ ಮಾತನಾಡಿ, ಪರಿಷತ್ತಿನ ಕೆಲಸ ಕಾರ್ಯಗಳು ಪ್ರಶಂಸನೀಯ. ಸೀತಮ್ಮ ಪ್ರೌಢಶಾಲೆ ವಿದ್ಯಾರ್ಥಿಗಳ ಶಿಸ್ತು ಮತ್ತು ಸಂಯಮ ಎಲ್ಲರೂ ಮೆಚ್ಚುವಂಥಹುದು. ಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ತರಲು ಶ್ರಮಿಸಬೇಕೆಂದು ತಿಳಿಸಿದರು.
ಡಾ. ಧನಂಜಯ ಮೂರ್ತಿ ಪರಿಷತ್ತಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಪರಮೇಶ್ ಅವರು ಮಕ್ಕಳು ಒಳ್ಳೆಯ ನಡತೆಯನ್ನ ಪಡೆಯುವುದರ ಜೊತೆಗೆ ಗುರು ಹಿರಿಯರಿಗೆ ಗೌರವ, ದೇಶ, ಭಾಷೆಗೆ ಗೌರವ ನೀಡಬೇಕೆಂದು ಸಲಹೆ ನೀಡಿದರು.
ಶಾಲೆಯ ಉಪ ಪ್ರಾಚಾರ್ಯ ಮಂಜಪ್ಪ ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಶಿಸ್ತು ನಡೆ-ನುಡಿಗಳಿದ್ದರೆ ಶಾಲೆಗೆ ಕೀರ್ತಿ ಬರುತ್ತದೆ ಎಂದು ಹೇಳಿದರು, ಅಧ್ಯಕ್ಷತೆ ವಹಿಸಿದ್ದ ಡಾ. ರವಿಕುಮಾರ್ ಮಾತನಾಡಿ, ಪರಿಷತ್ ಸದಾ ನಾಡು, ನುಡಿ, ಭಾಷೆಯ ಪರವಾಗಿದ್ದು, ಮಕ್ಕಳ ಹಕ್ಕಿಗಾಗಿ ಸದಾ ಹೋರಾಟ ಮಾಡುತ್ತಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಪರಿಷತ್ ಪದಾಧಿಕಾರಿಗಳಾದ ಎಂ.ಕುಮಾರ್, ಸುರೇಶ್ ರಾವ್, ಶುಭ, ದೀಪ, ಡಾ. ಅನ್ವಿತಾ ಉಪಸ್ಥಿತರಿದ್ದರು. ಹಾಗೂ ಶಾಲೆಯ ಶಿಕ್ಷಕ ಕೊಟ್ರೇಶ್ ಮತ್ತು ಗಂಗಾಧರ್ ನಿರೂಪಿಸಿದರು.