i
ಚಲನಚಿತ್ರ ಕ್ಷೇತ್ರದ ಕಲಾವಿದರ ಜಾಲತಾಣ ಉದ್ಘಾಟನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಲನಚಿತ್ರದ ಪೋಷಕರ ಸಮಗ್ರ ವಿವರಗಳುಳ್ಳನ್ನ ಕರ್ನಾಟಕದ ಜನತೆಗೆ ತಲುಪಿಸಲು ಮತ್ತು ಚಲನಚಿತ್ರ ಕ್ಷೇತ್ರಕ್ಕೆ ಹಾಗೂ ಪೋಷಕ ಕಲಾವಿದರಿಗೆ ಅನುಕೂಲವಾಗುವ ದೃಷ್ಠಿಯಿಂದ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘವು ಸಂಘದ ಅಧಿಕೃತ ಜಾಲತಾಣವನ್ನು ಪ್ರಾರಂಭಿಸಿ ಉದ್ಘಾಟಿಸಿತು.
ಇತ್ತೀಚೆಗೆ ನಗರದ ಚೇತನ್ ಇಂಟರ್ನ್ಯಾಷಿನಲ್ ಹೋಟಲ್ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಜಾಲತಾಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಿಗೆ ಉತ್ತಮ ಅವಕಾಶ ದೂರೆಯಲು ಮತ್ತು ಕಲಾವಿದರು ಯಾವತ್ತು ಬಿಜಿಯಾಗಿರಲು ಈ ಜಾಲತಾಣ ಸಹಾಯವಾಗುತ್ತದೆ. ಇಂತಹ ಜಾಲತಾಣ ಅವಶ್ಯಕವಾಗಿತ್ತು. ಚಲನಚಿತ್ರ ಕ್ಷೇತ್ರದ ಅಭಿವೃದ್ದಿಗೆ ಪೋಷಕ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಕೊರೊನಾ ಸಮಯದಲ್ಲಿ ಕಲಾವಿದರು ಬಹಳ ಸಂಕಷ್ಟ ಅನುಭವಿಸಿದ್ದಾರೆ. ಸಂಘ ಮತ್ತು ಸರಕಾರ ಪೂಷಕ ಕಲಾವಿದರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಪದ್ಮಿನಿ ನಂದಾ ಮಾತನಾಡಿ ಪೂಷಕ ಕಲಾವಿದರು ಸಂಕಷ್ಟದಲ್ಲಿದ್ದಾರೆ ಅವರ ಅಭಿವೃದ್ದಿಗೆ ಸಂಘ ಶ್ರಮಿಸುತ್ತಿದೆ ಕರ್ನಾಟಕ ಸರಕಾರ ಪೋಷಕ ಕಲಾವಿದರ ಕಲ್ಯಾಣಕ್ಕಾಗಿ ಮತ್ತು ಚಲನಚಿತ್ರ ಕ್ಷೇತ್ರದ ಅಭಿವೃದ್ದಿಗೆ ಯೋಜನೆಗಳನ್ನ ರೂಪಿಸುವುದರ ಮುಖಾಂತರ ಸಹಕರಿಸಬೇಕು ಎಂದರು.
ಪ್ರಾರಂಭದಲ್ಲಿ ಕಲಾವಿದರಾದ ಪ್ರೀತಿ ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ಕಲಾವಿದರಾದ ಎಂ.ಎನ್ ಲಕ್ಷೀದೇವಿ, ಕಲಾವಿದರ ಒಕ್ಕೂಟದ ಮ್ಯಾನೆಜರ್ ಸೋಮಶೇಖರ್, ರವಿಶಂಕರ್ ಉಪಸ್ಥಿತರಿದ್ದರು. ಜಯಲಕ್ಷ್ಮಿ(ಜಲಿಲಾ), ಮೊಗ್ ಸುರೇಶ್, ಮಾಲತಿ ಸುದೀರ್, ರಥಸಪ್ತಮಿ ಅರವಿಂದ್, ರಾಣಿ, ಗುಬ್ಬಿ ನಟರಾಜ್ ಮುಂತಾದ ಅನೇಕ ಹಿರಿಯ ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದರು.