i
ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳನ್ನು ವೀಕ್ಷಿಸಿ ಕಣ್ಮುಂಬಿಕೊಂಡ ವಿದೇಶಿಗರು…
ಚಂದ್ರವಳ್ಳಿ ನ್ಯೂಸ್, ವಿಜಯನಗರ:
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿರುವ ಜಿ- 20 ಶೃಂಗಸಭೆಯ ಶೆರ್ಪಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ಅತ್ಯುನ್ನತ ಪ್ರತಿನಿಧಿಗಳು ವಿಶ್ವ ವಿಖ್ಯಾತ ಹಂಪಿಯ ಐತಿಹಾಸಿಕ ತಾಣಗಳ ಸೊಬಗು ವೀಕ್ಷಿಸಿ ಅದ್ಭುತವಾದ ಸೊಬಗಿಗೆ ಮನಸೋತಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಖಾಸಗಿ ಹೊಟೇಲ್ ಒಂದರಲ್ಲಿ ನಡೆಯುತ್ತಿರುವ ಜಿ-20 ಶೆರ್ಪಾ ಸಭೆಯಲ್ಲಿ ಪಾಲ್ಗೊಂಡ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವ ವಿಖ್ಯಾತ ಹಂಪಿಯ ವಿವಿಧ ಸ್ಮಾರಕಗಳನ್ನು ವೀಕ್ಷಿಸಿ ಕಣ್ಮುಂಬಿಕೊಂಡರು.
ವಿಶ್ವ ವಿಖ್ಯಾತ ಹಂಪಿಯ ಹಲವು ಸ್ಮಾರಕಗಳನ್ನು ವೀಕ್ಷಣೆ ಮಾಡಿ ಐತಿಹಾಸಿಕ ತಾಣದ ಸೊಬಗು ಮನಸೋತರು.
ಜಿ-20 ರಾಷ್ಟ್ರಗಳ ಪ್ರತಿನಿಧಿಗಳಿಗೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಲು ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ವತಿಯಿಂದ ಎಎಸ್ಐ ಆಯೋಜಿಸಲಾಗಿತ್ತು.
ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ, ಕಮಲ ಮಹಲ್, ಗಜಶಾಲೆ ಸೇರಿದಂತೆ ಮತ್ತಿತರ ಸ್ಮಾರಕಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳಿಂದ ಜಿ-20 ಪ್ರತಿನಿಧಿಗಳಿಗೆ ಮಾಹಿತಿ ಕೊಡಿಲಾಯಿತು.
ಮಹಾನವಮಿ ದಿಬ್ಬದ ಮೇಲೆ ಹತ್ತಿ ಸುತ್ತಲಿನ ಹಂಪಿ ಪರಿಸರವನ್ನು ಕಣ್ತುಂಬಿಕೊಂಡ ವಿವಿಧ ದೇಶಗಳ ಗಣ್ಯರು ಮಹಾನವವಿ ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು. ಮಹಾನವಮಿ ದಿಬ್ಬದ ಸಮೀಪದಲ್ಲಿರುವ ಪುಷ್ಕರಣಿ ಕಂಡು ಆಗಿನ ಕಾಲದ ನೀರು ಸಂಗ್ರಹ ಜಲಪಾತ್ರೆ, ಸರಬರಾಜು ವ್ಯವಸ್ಥೆಯ ಬಗ್ಗೆ ಮಾಹಿತಿ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿರು.
ನಂತರ ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿ ಮೂಕಸ್ಮಿತರಾದರು. ಕಮಲ ಮಹಲ್, ಗಜಶಾಲೆ, ರಾಣಿ ಅರಮನೆ ಅನುಷ್ಠಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ವಿಜಯವಿಠ್ಠಲ ದೇವಸ್ಥಾನದ ವಿಶಾಲ ಮಾರ್ಗದಲ್ಲಿ ನಡೆದು ಬರುತ್ತಿದ್ದ ಅತ್ಯುನ್ನತ ಪ್ರತಿನಿಧಿಗಳಿಗೆ ನಗಾರಿ ಬಾರಿಸುವ ಮೂಲಕ ಸ್ವಾಗತ ಕೋರಲಾಯಿತು. ಕಗ್ಗತ್ತಲ ನಡುವೆ ಸ್ಮಾರಕಗಳಿಗೆ ಅಳವಡಿಸಿದ್ದ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳು ವಿದೇಶಿಗರ ಗಮನ ಸೆಳೆಯಿತು.
ವಿಜಯವಿಠ್ಠಲ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಂತೆ ಕಹಳೆ ಊದಿ ಸ್ವಾಗತಿಸಲಾಯಿತು. ಸ್ಮಾರಕಗಳ ವೀಕ್ಷಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿಸಿದ ಪ್ರತಿನಿಧಿಗಳಿಗಳಿಗೆ ವಿಜಯವಿಠಲ ದೇವಸ್ಥಾನದಲ್ಲಿ ಖ್ಯಾತ ಜಾನಪದ ಗಾಯಕಿ ಶಿಲ್ಪಾ ಮುಡಬಿ ಅವರಿಂದ “ಆರತಿ ಬೆಳಗಿರಿ ಕಾರುಣ್ಯ ಮೃಢ ಹರನಿಗೆ” ಎಂಬ ಜಾನಪದ ಹಾಡಿನ ಮೂಲಕ ಅತಿಥಿಗಳನ್ನು ವಿಜಯವಿಠಲ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ವಿಜಯವಿಠ್ಠಲ ದೇವಸ್ಥಾನದ ಆವರಣದ ಪ್ರತಿ ಮಂಟಪದ ಕಲಾವಿದರು ತಮ್ಮ ಕಲಾ ಪ್ರದರ್ಶಿಸಿ ವಿದೇಶಿಗರನ್ನು ಮೆರಗುಗೊಳಿಸಿದರು.
ಭರತ್ಯ ನಾಟ್ಯ, ಮೊಹಿನಿಯಾಟ್ಟಂ, ಓಡಿಸ್ಸಿ, ಕುಚುಪುಡಿ ನೃತ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದಾಗ ವಿದೇಶಿಗರ ಕಣ್ಣಗಳಲ್ಲಿ ಆನಂದಭಾಷ್ಪಗಳು ಹೊರ ಹೊಮ್ಮಿದವು.
ಮಂಟಪದಲ್ಲಿ ಕಲಾವಿದರು ಜಾನಪದ ಗೀತೆಗೆ ಕೋಲಾಟ ಪ್ರದರ್ಶಿಸಿದರು. ನಂತರ ಅರಸನ ತುಲಾಭಾರಕ್ಕೆ ಅಲ್ಲಿನ ಐತಿಹಾಸಿಕ ಮಾಹತ್ವವನ್ನು ಸಾಂಸ್ಕೃತಿಕ ಉಡುಪನ್ನು ಧರಿಸಿದ್ದ ಪ್ರವಾಸಿ ಮಾರ್ಗದರ್ಶಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಪ್ರತಿನಿಧಿಗಳಿಗೆ ಕಲ್ಲಿನ ರಥ, ಸಪ್ತಸ್ವರ ಮಂಟಪದ ಮಹತ್ವ ಸಾರಿ ಸಪ್ತಸ್ವರ ಕಂಬದಲ್ಲಿ ಬರುವ ಸ್ವರಗಳನ್ನು ಒಮ್ಮಿಸಿ ಕೇಳಿಸಿದರು. ನಂತರ ವಿಕ್ಕು ವಿನಾಯಕ್ ತಂಡದಿಂದ ಗಟ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಂಪಿಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಗಳು, ಐತಿಹಾಸಿಕ ಸ್ಮಾರಕಗಳು ವಿದೇಶಿಗರ ಮನದಲ್ಲಿ ಸ್ಥಿರವಾಗಿ ನೆಲೆಯೂರಿದವು.