i
ಬಜ್ಜೇರ ವೆಂಕಟೇಶಪ್ಪ ಸರಳ, ಸಜ್ಜನಿಕೆ ರಾಜಕಾರಣಿ-ಸಚಿವ ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಗ್ರಾಮದ ಹಿರಿಯ ರಾಜಕಾರಣಿ ಬಿ.ಹೆಚ್. ವೆಂಕಟೇಶಪ್ಪನವರು ಅತ್ಯಂತ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದರು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಹರಿಯಬ್ಬೆ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಹೆಚ್ ವೆಂಕಟೇಶ್ ರವರ ಪುಣ್ಯಸ್ಮರಣೆಯಂದು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಹರಿಯಬ್ಬೆ ಗ್ರಾಮಕ್ಕೆ ತನ್ನದೇ ಆದ ಕೊಡುಗೆಯನ್ನು ಶ್ರೀಯುವತರು ನೀಡಿದ್ದಾರೆ. ಅಷ್ಟೇ ಅಲ್ಲ ಗ್ರಾಮದಲ್ಲಿ ಶಾಂತಿ, ಸಹಭಾಳ್ವೆಗೆ ಒತ್ತು ನೀಡಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ಸಚಿವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಹೆಚ್.ಮಂಜುನಾಥ್, ಈರಲಿಂಗೇಗೌಡ, ಚಂದ್ರಯ್ಯ ಹರಿಯಬ್ಬೆಪಾಳ್ಯ, ಕೆಂದಗೋಳಿ ಹನುಮಂತಪ್ಪ, ಸಾಯಿನಾಥ್, ಗೋವಿಂದರಾಜು, ಗ್ರಾ.ಪಂ ಸದಸ್ಯ ನರೇಂದ್ರ, ಸೂಗೂರು ರಾಜಣ್ಣ, ಬಿ.ಹೆಚ್.ವೆಂಕಟೇಶಪ್ಪನವರ ಪುತ್ರ ಕೆಎಎಸ್ ಅಧಿಕಾರಿ ಮಾರುತಿ ಪ್ರಸನ್ನ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.