i
ನಿಯಮ ಪಾಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಅಗತ್ಯ ಕ್ರಮ– ಗೃಹ ಸಚಿವರು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಗಿರವಿ ಅಂಗಡಿ ಹಾಗೂ ಚಿನ್ನದ ಅಂಗಡಿ ಮಾಲೀಕರಿಗೆ ರಿಕವರಿ ನೆಪದಲ್ಲಿ ಪೊಲೀಸರು ಯಾವುದೇ ಕಿರುಕುಳ ನೀಡುತ್ತಿರುವುದಿಲ್ಲ. ಉಚ್ಚ ನ್ಯಾಯಾಲಯದ ತೀರ್ಪಿನಂತೆ ಕಾರ್ಯನಿರ್ವಹಣೆ ಮಾಡಲು ಬೆಂಗಳೂರು ಪೊಲೀಸ್ ಆಯುಕ್ತರು ಎಲ್ಲಾ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ಆದೇಶವನ್ನು ಹೊರಡಿಸಿರುತ್ತಾರೆ. ಮತ್ತೊಮ್ಮೆ ಎಲ್ಲಾ ಅಧಿಕಾರಿ / ಸಿಬ್ಬಂದಿಯವರಿಗೆ ಸೂಚನೆಗಳನ್ನು ನೀಡಲಾಗುವುದು, ಸೂಚನೆಗಳನ್ನು ಪಾಲಿಸದೇ / ಅನುಸರಿಸದೇ ಇರುವ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಸೂಕ್ತ ಇಲಾಖಾ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.
ವಿಧಾನಪರಿಷತ್ತಿಲ್ಲಿಂದು ವಿಧಾನಪರಿಷತ್ತಿನ ಸದಸ್ಯರಾದ ಟಿ.ಎ. ಶರವಣ ಅವರು ನಿಯಮ 72ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು ಮಹಾ ನಿರ್ದೇಶಕರು ಮತ್ತು ಆರಕ್ಷಕ ನಿರೀಕ್ಷಕರು ರವರ ಪತ್ರದ ಸಂಕ್ಯೆ ಅಪರಾಧ 3/187/2018 ದಿನಾಂಕ: 06-03-2019 ರಂದು ನಿರ್ಧಿಷ್ಟ ಕಾರ್ಯ ವಿಧಾನಗಳ ಬಗ್ಗೆ ಆದೇಶವನ್ನು ಹೊರಡಿಸಿರುತ್ತಾರೆ. ಈ ಆದೇಶದಂತ ಆರೋಪಿಯ ದಸ್ತಗಿರಿ ಸಮಯದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸುವುದು. ಕಲಂ 27 ಇಂಡಿಯನ್ ಎವಿಡೆನ್ಸ್ ಕಾಯ್ದೆ ಅಡಿಯಲ್ಲಿ ಆರೋಪಿತನ, ಸ್ವ-ಇಚ್ಚಾ ಹೇಳಿಕೆಯನ್ನು ಪಡೆಯುವಾಗ ವಿಡಿಯೋಗ್ರಾಫ್ ಮಾಡಿಸುವುದು. ಸ್ವ-ಇಚ್ಚಾ ಹೇಳಿಕೆ ಪಡೆಯುವ ಸಮಯದಲ್ಲಿ ಕಡ್ಡಾಯವಾಗಿ ಪಂಚರ ಸಮಕ್ಷಮ ಪಡೆಯುವುದು, ವಿಡಿಯೋಗ್ರಾಫನ್ನು ಮಾಲು ಪಟ್ಟಿಯಲ್ಲಿ ಅಳವಡಿಸಿ ದೋಷಾರೋಪಣ ಪತ್ರದಲ್ಲಿ ಲಗತ್ತಿಸುವುದು.
ಆರೋಪಿತನು ಒಂದು ಕಡೆಗಿಂತ ಹೆಚ್ಚು ಕಡೆಗಳಲ್ಲಿ ಕಳ್ಳತನ/ರಾಬರಿ/ಡಕಾಯಿತಿ ಮಾಡಿರುವ ಬಗ್ಗೆ ಹೇಳಿಕೆ ನೀಡಿದಲ್ಲಿ, ಸಂಬಂಧಿಸಿದ ಸ್ಥಳಗಳ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಿ ಕೃಶ್ಯವೆಸಗಿರುವುದು ಖಾತ್ರಿಯಾದ ನಂತರ ಸದರಿ ಸ್ಥಳದ ಪಂಚನಾಮೆಯನ್ನು ಜರುಗಿಸುವುದು. ಆರೋಪಿತನ ಹೇಳಿಕೆಯನ್ನು ಆಧರಿಸಿ ಪರಿಶೀಲಿಸಿದ ಸ್ಥಳಗಳಲ್ಲಿ ನಡೆದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದರಿ ಪೆÇಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಥಮ ವರ್ತಮಾನದ ವರದಿಗಳನ್ನು ಸಂಗ್ರಹಿಸತಕ್ಕದ್ದು. ಆರೋಪಿತನು ತಾನು ಕಳವು ಮಾಲನ್ನು ಸ್ವೀಕರಿಸಿದವರ ಕುರಿತು ಮಾಹಿತಿಯನ್ನು ನೀಡುವಾಗ ಅವನು ಸತ್ಯವನ್ನು ಹೇಳುತ್ತಿದ್ದಾನೆಯೇ ಎಂಬ ಬಗ್ಗೆ ವಿವಿಧ ಕೋನಗಳಿಂದ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವುದು.
ಆರೋಪಿತನು ನೀಡಿದ ಸ್ವ-ಇಚ್ಚಾ ಹೇಳಿಕೆ ಮತ್ತು ಕಳವು ಮಾಲನ್ನು ಸ್ವೀಕರಿಸಿದ ವ್ಯಕ್ತಿಗಳ ಮಾಹಿತಿಯನ್ನು ಒಳಗೊಂಡ ಪೂರ್ಣ ವಿವರಗಳನ್ನು ತನಿಖಾಧಿಕಾರಿಯು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದು. ಪ್ರತಿಯೊಂದು ಪ್ರಥಮ ವರ್ತಮಾನ ವರದಿಯಲ್ಲಿ ಕಳುವಾಗಿರುವ ಒಡವೆಗಳು ವಸ್ತುಗಳ ಪೂರ್ಣ ಮಾಹಿತಿಯನ್ನು ಪಟ್ಟಿ ಮಾಡಿಕೊಳ್ಳುವುದು. ಕಳವು ಮಾಲನ್ನು ಅಮಾನತ್ತುಪಡಿಸಿಕೊಳ್ಳಲು ಆರೋಪಿ ಮತ್ತು ಪಂಚರ ಜೊತೆ ತನಿಖಾಧಿಕಾರಿಯು ಹೋಗುವಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು ಹಾಗೂ ನಾಮಫಲಕ ಕಾಣುವಂತಿರಬೇಕು. ಆರೋಪಿತನು ಕಳವು ಮಾಲನ್ನು ಸ್ವೀಕರಿಸಿದ ವ್ಯಕ್ತಿ / ಅಂಗಡಿಯನ್ನು ತೋರಿಸಿ ಹಾಜರುಪಡಿಸಿದ ಬಗ್ಗೆ ನೀಡಿದ ಸ್ವ-ಇಚ್ಚಾ ಹೇಳಿಕೆಯನ್ನು ಆಧರಿಸಿ, ಪಂಚರನ್ನು ಹಾಜರುಪಡಿಸಿಕೊಂಡು ಅವರಿಗೆ ಪೂರ್ಣ ವಿವರವನ್ನು ಆರೋಪಿತನಿಂದಲೇ ಹೇಳಿಸುವುದು.
ಪಂಚರಿಗೆ ತನಿಖಾಧಿಕಾರಿಯು ಯಾವ ಪ್ರಕರಣಗಳಲ್ಲಿ ವಸ್ತು ಒಡವೆಗಳನ್ನು ಅಮಾನತ್ತು ಪಡಿಸಿಕೊಳ್ಳಬೇಕಾಗಿದೆ ಮತ್ತು ಪಂಚರು ಹಾಜರಿರುವ ಬಗ್ಗೆ ನೋಟೀಸನ್ನು ಜಾರಿ ಮಾಡಿ ಅವರ ಸಹಿಯನ್ನು ಪಡೆದುಕೊಳ್ಳುವುದು. ಆರೋಪಿತನು ಕಳವು ಮಾಲನ್ನು ಮಾರಾಟ ಮಾಡಿದ, ಗಿರಿಸಿ ಇಟ್ಟಿದ್ದ ಅಂಗಡಿಯು ಬೇರೆ ಪೆÇಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದಲ್ಲಿ ಆ ಪೆÇಲೀಸ್ ಠಾಣೆಯ ಠಾಣಾಧಿಕಾರಿಯವರಿಗೆ ಮಾಹಿತಿ ನೀಡುವುದು. ಪಂಚರು ಮತ್ತು ತನಿಖಾಧಿಕಾರಿಗೆ ಆರೋಪಿತನು ತಾನು ಕಳವು ಮಾಲನ್ನು ನೀಡಿದ ವ್ಯಕ್ತಿ / ಅಂಗಡಿಯನ್ನು ತೋರಿಸಿದಾಗ ಅಂಗಡಿಯನ್ನು ಪ್ರವೇಶಿಸುವ ಸಮಯದಲ್ಲಿಯೇ ವಿಡಿಯೋಗ್ರಾಫಿಯನ್ನು ಪ್ರಾರಂಭಿಸಬೇಕು.
ಕಳವು ಮಾಲನ್ನು ಸ್ವೀಕರಿಸಿದ ವ್ಯಕ್ತಿಯನ್ನು ಆರೋಪಿತನು ಗುರುತಿಸಿ ತಾನು ಈ ಹಿಂದೆ ಮಾರಾಟ ಮಾಡಿದ ವಸ್ತು ಒಡವೆಗಳನ್ನು ಹಿಂತಿರುಗಿಸುವಂತೆ ತಿಳಿಸಿದಾಗ ಕಳವು ಮಾಲನ್ನು ಸ್ವೀಕರಿಸಿದ ವ್ಯಕ್ತಿಯಿಂದ ಸದರಿ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು. ಅಂಗಡಿಯಲ್ಲಿ ಸಿ.ಸಿ. ಟಿವಿ ಅಳವಡಿಸಿದ್ದಲ್ಲಿ ಅದರ ಸಂಗ್ರಹಣೆಯನ್ನು ಖಚಿತಪಡಿಸಿಕೊಂಡು ಮಾಹಿತಿಯನ್ನು ಪಡೆಯುವುದು. ಪ್ರಥಮ ವರ್ತಮಾನ ವರದಿಯಲ್ಲಿ ನಮೂದಾದ ಒಡವೆ / ವಸ್ತುಗಳ ಪೂರ್ಣ ವಿವರವನ್ನು ಒಳಗೊಂಡ ನೋಟೀಸನ್ನು ಸ್ಥಳದಲ್ಲಿಯೇ ಕಳವು ಸ್ವತ್ತನ್ನು ಸ್ವೀಕರಿಸಿದವರಿಗೆ ಪ್ರಥಮ ವರ್ತಮಾನ ವರದಿಯನ್ನು ಲಗತ್ತಿಸಿ ನೀಡುವುದು.
ಅಮಾನತ್ತು ಪಡಿಸಿಕೊಳ್ಳುವ ವಸ್ತು / ಒಡವೆ ಗುಣಮಟ್ಟ ಮತ್ತು ತೂಕವನ್ನು ಮಾಡಿದ ವ್ಯಕ್ತಿಯ ಸಹಿಯನ್ನು ಪಡೆದುಕೊಳ್ಳುವುದು ಹಾಗು ಆತನನ್ನು ಸಾಕ್ಷಿಯಾಗಿ ಪರಿಗಣಿಸುವುದು. ಅಮಾನತ್ತು ಪಡಿಸಿಕೊಳ್ಳುವಾಗ ಸ್ಥಳದಲ್ಲಿಯೇ ಪಂಚನಾಮೆಯನ್ನು ಮಾಡಿ ಕಳವು ಮುಲನ್ನು ಸ್ವೀಕರಿಸಿದ ವ್ಯಕ್ತಿಯ ಹಾಗೂ ಪಂಚರ ಸಹಿಯನ್ನು ಪಡೆಯುವುದು. ಅಮಾನತ್ತು ಪಡಿಸಿಕೊಂಡ ವಸ್ತು ಒಡವೆ ಅಮಾನತ್ತು ಚೀಟಿಗಳನ್ನು ಅದೇ ದಿನ ಪಂಚನಾಮೆ ಜೊತೆ ಠಾಣೆಗೆ ಬಂದು ಠಾಣಾ ಮಾಲುಪಟ್ಟಿಯಲ್ಲಿ ಅಳವಡಿಸಿ, ಮಾನ್ಯ ನ್ಯಾಯಾಲಯಕ್ಕೆ ಮುಂದಿನ ಅದೇಶಕ್ಕಾಗಿ ಹಾಜರುಪಡಿಸುವುದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.