i
ಸಮಾಜಮುಖಿ ಕಾರ್ಯದಲ್ಲಿ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಗಳು:ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ನೆರವು ಕಲ್ಪಿಸುವ ನೆರವು ಕಲ್ಪಿಸುವ ಅಂತರಾಷ್ಟ್ರೀಯ ಸಂಸ್ಥೆಯ ಸಾಲಿನಲ್ಲಿ ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ಗಳು ಪ್ರಧಾನ ಸ್ಥಾನ ಪಡೆದಿವೆ. ಸಮಾಜದ ಎಲ್ಲಾ ವರ್ಗದ ಜನರು ಈ ಸಂಸ್ಥೆಯ ನೆರವು ಪಡೆಯುವಲ್ಲಿ ಮುಂದಾಗಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು ರೋಟರಿ ಬಾಲ ಭವನದಲ್ಲಿ ರೋಟರಿ, ಇನ್ನರ್ವೀಲ್ ಕ್ಲಬ್ಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಜನರನ್ನು ಮಾರಕವಾಗಿ ಕಾಡಿದ್ದ ಕೊರೋನವನ್ನು ನಿಯಂತ್ರಿಸಲು ಸರ್ಕಾರದ ಜೊತೆಗೆ ಕೈಜೋಡಿಸಿದ್ದಲ್ಲದೆ, ಗ್ರಾಮೀಣ ಭಾಗದ ಜನರನ್ನು ಜಾಗೃತಿಗೊಳಿಸುವ ಕಾಂiiವನ್ನು ಎರಡೂ ಸಂಸ್ಥೆಗಳು ಮಾಡಿದ್ದು, ಇವರ ಸಕಾಲಿನ ಕ್ರಮದಿಂದ ಹಲವಾರು ಜೀವಗಳ ರಕ್ಷಣೆಯಾಗಿದೆ ಎಂದರು.
ಅಧಿಕಾರ ಗೌಪ್ಯತೆ ಬೋಧಿಸಿದ ನಿರ್ಗಮನ ಸಹಾಯಕ ಗೌರ್ನರ್ ಎನ್.ಎಸ್.ರಾಘವೇಂದ್ರ ಮಾತನಾಡಿ, ರೋಟರಿ ಕ್ಲಬ್ ಸಮಾಜ ಸೇವಾ ಚಟುವಟಿಕೆಗಳ ಮುಖ್ಯ ಕಾರ್ಯಕ್ಷೇತ್ರವಾಗಿದೆ. ಅಧಿಕಾರ ಸ್ವೀಕರಿಸಿದ ಅಧಿಕಾರಿಗಳು ಹಾಗೂ ಎಲ್ಲಾ ಪಾಧಿಕಾರಿಗಳು ಇನ್ನಷ್ಟು ಸೇವಾ ಕಾರ್ಯದ ಮೂಲಕ ಸಂಸ್ಥೆಗೆ ಹೆಸರು ತನ್ನಿ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕೆ.ನಾಗೇಶ್, ಕಾರ್ಯದರ್ಶಿಯಾಗಿ ಆರ್.ತಿಪ್ಪೇಸ್ವಾಮಿ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಮೀರಾರಮೇಶ್, ಕಾರ್ಯದರ್ಶಿಯಾಗಿ ಸುನಿತಾಬಸವರಾಜಗೌಡ ಅಧಿಕಾರ ಸ್ವೀಕರಿಸಿದರು.
ಸಹಾಯಕ ಗೌರ್ನರ್ ಉಮೇಶ್ ವಿ.ತುಪ್ಪದ, ಮಾಜಿ ಛೇರ್ಮನ್ ಜ್ಯೋತಿಲಕ್ಷ್ಮಣ್, ಮಾಜಿ ಅಧ್ಯಕ್ಷ ಸಂತೋಷ್ಕುಮಾರ್, ಕೆ.ಎಂ.ಪ್ರಕಾಶ್, ಡಾ.ಎನ್.ಪಿ.ನಾಗರಾಜು, ಆರ್.ತಿಪ್ಪೇಸ್ವಾಮಿ, ಜಿ.ಕೆ.ಟಿ.ಮೂರ್ತಿ, ಡಾ.ಲೋಕೇಶ್, ಸಿ.ಸಿದ್ದಾರ್ಥ, ಸಂತೋಷಕುಮಾರ್ರೆಡ್ಡಿ, ಶಿವಕೀರ್ತಿ, ಕೆ.ಎ.ಮೂರ್ತಪ್ಪ, ಎಸ್.ವಿ.ಮುರುಗೇಶ್, ಶೋಭಾಯತೀಶ್, ಸಹನ, ಬಿ.ವಿ.ಕಿರಣ್, ಡಾ.ಕೆ.ಎಂ.ಜಯಕುಮಾರ್, ಕೆ.ಜಿ.ಮಂಜುನಾಥ, ಸಂಜಯ್ ಬಾಲಾಜಿ, ಕಾಂಗ್ರೆಸ್ ಮುಖಂಡ ನೇರಲಗುಂಟೆರಾಮಪ್ಪ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.