i
ಕಾಂಗ್ರೆಸ್ ಪಕ್ಷದ 2ನೇ ಸಾಲಿನ ಮಾದಿಗ ಸಮುದಾಯದ ಮುಖಂಡರುಗಳಿಗೆ ಅವಕಾಶ ಕಲ್ಪಿಸಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈಗ ನಡೆಯುತ್ತಿರುವ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ವಿಚಾರವಾಗಿ ಮೇಲ್ಕಂಡ ಸಮಿತಿಯವರು ಕಾಂಗ್ರೆಸ್ ಪಕ್ಷದ ಎ.ಐ.ಸಿ.ಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿರವರು ಹಾಗೂ ಹಿರಿಯ ಸಚಿವರುಗಳಿಗೆ 2ನೇ ಹಂತದ ಮುಖಂಡರುಗಳು ಒತ್ತಾಯ ಮಾಡುವುದೇನೆಂದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಜಯಭೇರಿಗಳಿಸಲು ಮಾದಿಗ ಸಮಾಜದ ಮುಖಂಡರುಗಳು ಶ್ರಮ ಸಾಕಷ್ಟಿರುತ್ತದೆ. ಈಗ ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮಾಜಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ ನಿವೃತ್ತಿ ಅಧಿಕಾರಿ ಸುಧಾಮದಾಸ್ ರವರನ್ನು ನಾಮ ನಿರ್ದೇಶನ ಮಾಡಲು ಪಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಸುದಾಮದಾಸ್ ಒಬ್ಬ ನಿವೃತ್ತ ಅಧಿಕಾರಿ ಅಷ್ಟೇ ಅವರದು ಪಕ್ಷಕ್ಕೆ ಕೊಡುಗೆ ಏನು ಎಂಬುದು ಸಾರ್ವಜನಿಕರಲ್ಲಿ ಚರ್ಚೆ ನಡಿಯುತ್ತಿದೆ. ಕೆಲವೇ ತಿಂಗಳುಗಳ ನಂತರ ಲೋಕಸಭಾ ಚುನಾವಣೆ ಬರುತ್ತಿದ್ದು, ಚುನಾವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನೂ ಗೆಲ್ಲಬೇಕಾದರೆ ಪಕ್ಷಕ್ಕೆ ಅಂದಿನಿಂದಲೂ ದುಡಿದವರಿಗೆ ನಿಷ್ಟಾವಂತೆ ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ಮುಖಂಡರುಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮಾದಿಗ ಸಮಾಜದ 2ನೇ ಸಾಲಿನ ಮುಖಂಡರುಗಳ ಒತ್ತಾಯವಾಗಿದೆ.
2ನೇ ಸಾಲಿನ ಮಾದಿಗ ಸಮಾಜದ ಮುಖಂಡರ ಪಟ್ಟಿ-ಆ. ರಾಮಕೃಷ್ಣ, ಮಾಜಿ ಅಧ್ಯಕ್ಷರು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಡಾ.ಬಿ.ತಿಪ್ಪೇಸ್ವಾಮಿ(2009) ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ.ಓ ಶಂಕರ್, ಮಾಜಿ ಅಧ್ಯಕ್ಷರು ಡಾ.ಬಾಬು ಜಗಜೀವನ್ ರಾಮ್, ಲಿಡ್ಕರ್ ಕರ್ನಾಟಕ.
ಎಂ. ಅರ್ಜುನ್ ಕನಕ ಬೀದರ್ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು.ಶಂಕರ್ ಕಲ್ಲಪ್ಪ ಹೊಸಮನಿ ಸದಸ್ಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ.ಮೋಹನ್ ಹಿರೇಮನಿ, ಸದಸ್ಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. ನಾಗರಾಜ್ ಮುಂಡರಗಿ ಮಾಜಿ ಸದಸ್ಯರು ಜಿಲ್ಲಾ ಪಂಚಾಯತಿ. ಹನುಮಂತಪ್ಪ ರಾಯಚೂರು ಮಾಜಿ ಸದಸ್ಯರು ಜಿಲ್ಲಾ ಪಂಚಾಯತಿ. ಮೇಲಿನ ಒಬ್ಬರು ಮಾದಿಗ ಸಮಾಜದ ಮುಖಂಡರುಗಳನ್ನು ನಾಮನಿರ್ದೇಶನ ಮಾಡುವಂತೆ ಅವರು ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ.