i
ಕೆಪಿಸಿಸಿ ಸಂಯೋಜಕಿ ಪಲ್ಲವಿ ನೇತೃತ್ವದಲ್ಲಿ ಸಿಎಂ ಭೇಟಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಳುವ ಸಮಾಜದ ಮುಖಂಡರು, ಕೆಪಿಸಿಸಿ ಸಂಯೋಜಕಿ ಪಲ್ಲವಿ ಅವರ ನೇತೃತ್ವದ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಪದಾಧಿಕಾರಿಗಳ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಶಹನಾಯಿ ಮಾಂತ್ರಿಕರಾದ ಸನಾದಿ ಅಪ್ಪಣ್ಣ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಿ ಸ್ಮಾರಕ ನಿರ್ಮಾಣ ಮತ್ತು ಸಂಗೀತ ಮ್ಯೂಸಿಯಂ ಸ್ಥಾಪಿಸುವುದು ಸೇರಿದಂತೆ ಸಮುದಾಯದ ಪ್ರಗತಿಗಾಗಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.