i
ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಸಣ್ಣ ಚಿತ್ತಯ್ಯ ಅವರಿಗೆ ಆತ್ಮೀಯ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಿಲಾಯಿತು.
ವ್ಯವಸ್ಥಾಪಕ ನಿರ್ದೇಶಕರು ಚಿತ್ರದುರ್ಗ ಸಮೀಪದ ಭದ್ರಾ ಮೇಲ್ದಂಡೆ ಯೋಜನಾ ಪ್ರದೇಶಕ್ಕೆ ಭೇಟಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯವರು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಬೇಕು, ವೈ-ಜೆಕ್ಷನ್ ಬಳಿ ಇರುವ ಸಮಸ್ಯೆ ಇತ್ಯಾರ್ಥ ಮಾಡಿ ಬಯಲು ಸೀಮೆ ವ್ಯಾಪ್ತಿಯವಿವಿ ಸಾಗರ ಡ್ಯಾಂಗೆ ಮತ್ತು ತುಮಕೂರು ಮತ್ತು ಚಿತ್ರದುರ್ಗ ಮುಖ್ಯ ಕಾಲುವೆಗಳಲ್ಲಿ ನೀರು ಹರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಕಾರ್ಯಾಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಸಿ ಸಿದ್ದರಾಮಣ್ಣ, ಸಂಚಾಲಕ ಆರನಕಟ್ಟೆ ಶಿವಕುಮಾರ್, ಖಜಾಂಚಿ ವಕೀಲ ಬಬ್ಬೂರು ಸುರೇಶ್, ನಿರ್ದೇಶಕ ಎಂಎಂಎಂ ಮಣಿ, ವಿಶ್ವೇಶ್ವರಯ್ಯ ಜಲ ನಿಗಮದ ಮುಖ್ಯ ಇಂಜಿನಿಯರ್ ಶಿವಪ್ರಕಾಶ್, ಪತ್ರಕರ್ತ ಚಿದಾನಂದ್ ಮಸ್ಕಲ್ ಉಪಸ್ಥಿತರಿದ್ದರು.