i
ಜೆ.ರಾಜು ಬೇತೂರು ಪಾಳ್ಯ ಇವರಿಗೆ ಡಬಲ್ ಧಮಾಕ!!…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕೆಂಚಪ್ಪ ಗೌಡರ ನೇತೃತ್ವದ ತಂಡ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಬಂದಿದ್ದು ಅಧ್ಯಕ್ಷರಾಗಿ ಎಲ್.ಹನುಮಂತಯ್ಯ ಇವರು ಅವಿರೋಧ ಆಯ್ಕೆಯಾಗಿರುತ್ತಾರೆ.
ಅಲ್ಲದೆ ಚಿತ್ರದುರ್ಗ ಜಿಲ್ಲೆಯಿಂದ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜೆ ರಾಜು ಬೇತೂರು ಪಾಳ್ಯ ಇವರಿಗೆ ನೂತನ ಆಡಳಿತ ಮಂಡಳಿಯಲ್ಲಿ ಡಬಲ್ ಧಮಾಕ ಲಭ್ಯವಾಗಿದೆ.
ಹಿರಿಯೂರು ತಾಲ್ಲೂಕಿನ ಬೇತೂರು ಪಾಳ್ಯದವರಾದ ಜೆ.ರಾಜು ಇವರನ್ನು ಬೆಂಗಳೂರಿನ ಒಕ್ಕಲಿಗರ ಸಂಘದ ದಂತ ವೈದ್ಯ ಮಹಾ ವಿದ್ಯಾಲಯದ ಮತ್ತು ಆಸ್ಪತ್ರೆಯ ಅಧ್ಯಕ್ಷರಾಗಿ ಈ ಹಿಂದಿನಂತೆ ಮುಂದರೆದಿರುವುದಲ್ಲದೆ, ಹೆಚ್ಚುವರಿಯಾಗಿ ಒಕ್ಕಲಿಗರ ಸಂಘವು ರಾಜ್ಯಾದ್ಯಂತ ನಿರ್ವಹಿಸುವ ಬೇರೆ ಜಿಲ್ಲೆಗಳ(ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಹೊರೆತುಪಡಿಸಿ) ಕಟ್ಟಡ ಕಾಮಗಾರಿಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ರಾಜು ಬೇತೂರು ಪಾಳ್ಯ ಇವರಿಗೆ ಮಹತ್ವದ ಹುದ್ದೆಗಳು ಲಭ್ಯವಾಗಿರುವುದರಿಂದ ಚಿತ್ರದುರ್ಗ-ಹಿರಿಯೂರು ಸೇರಿದಂತೆ ರಾಜ್ಯ ಇತರೆ ಜಿಲ್ಲೆಗಳು ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್, ಆಸ್ಪತ್ರೆಗಳು, ಶಾಲಾ ಕಾಲೇಜ್ ಗಳ ಕಟ್ಟಡ ಸೇರಿದಂತೆ ಇತರೆ ಕಾಮಗಾರಿಗಳನ್ನು ಒಕ್ಕಲಿಗ ಸಂಘದ ಅಧೀನದಲ್ಲಿ ಕೈಗೊಳ್ಳುವ ಅವಕಾಶ ಹೆಚ್ಚು ಇದ್ದು ಈ ಕಾರ್ಯದಲ್ಲಿ ಕಾರ್ಯಮಗ್ನರಾಗುವಂತೆ ಸಮಾಜದ ಹಿರಿಯರ ಅಭಿಲಾಶೆಯಾಗಿರುತ್ತದೆ.
ಜೆ.ರಾಜು ಅವರು ಹಾಲಿ ಬಿಬಿಎಂಪಿ ಪೂರ್ವ ವಲಯದಲ್ಲಿ ಉಪ ಆಯುಕ್ತ (ಕಂದಾಯ) ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.