i
ಪ್ರಧಾನಿ ಮೋದಿ ಅವರು ಉಚಿತವಾಗಿ ಗ್ಯಾಸ್ ನೀಡಲಿ-ಮಾಜಿ ಸಂಸದ ಚಂದಪ್ಪ…
ಚಂದ್ರವಳ್ಳಿನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಚನೆಯಾಗಿ 100 ದಿನ ಪೂರೈಸುವುದರೊಳಗೆ ಪಕ್ಷ ಜನರಿಗೆ ನೀಡಿದ 5 ಗ್ಯಾರಂಟಿಗಳ ಪೈಕಿ ನಾಲ್ಕನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಯಾಶಸ್ವಿಯಾಗಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಿಳಿಸಿದ್ದಾರೆ.
ಮುಂಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ನೇತೃತ್ವದ ಜೋಡೆತ್ತಿನ ಸರ್ಕಾರ ಬುಧವಾರ ಗೃಹಲಕ್ಷ್ಮಿ ಯೋಜನೆ
ಅದ್ಬುತವಾಗಿ ಜಾರಿಗೊಳಿಸಿದ್ದು, ತಾಯಂದಿರ- ಸಹೋದರಿಯರ ಖಾತೆಗೆ ಪ್ರತಿ ತಿಂಗಳು ನೇರವಾಗಿ 2 ಸಾವಿರ ರೂ. ಜಮೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಬಲ ತುಂಬುವ ಕೆಲಸ ಮಾಡಿದೆ. ಪಕ್ಷದ ಗ್ಯಾರಂಟಿಗಳ ಮಧ್ಯೆ ಬಿಜೆಪಿ ಕಳೆದು ಹೋಗಿದ್ದು, ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷದ ಕಥೆ ಇದಕ್ಕೆ ಭಿನ್ನವಾಗಿರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ 9 ವರ್ಷಗಳಲ್ಲಿ ಬಡವರ, ಮಧ್ಯಮ ವರ್ಗದವರ ಕಡೆಗಣಿಸಿ ಅದಾನಿ, ಅಂಬಾನಿಗಳ ಅಭಿವೃದ್ಧಿ ಪರ ಕೆಲಸ ಮಾಡಿದೆ. ವಿಪರ್ಯಾಸವೆಂದರೆ ಬಿಜೆಪಿಗೆ ಚುನಾವಣೆ ಸಮೀಪಿಸಿದಾಗ ಬಡವರ, ಮಧ್ಯವ ಮರ್ಗದ ಮೇಲೆ ಅನುಂಕಪ ಹುಕ್ಕಿ ಹರಿಯುತ್ತಿದ್ದು, 1,250 ರೂ.ಗಳಿದ್ದ ಗ್ಯಾಸ್ ಸಿಲಿಂಡರ್ ಬೇಲೆ 200 ರೂ. ಕಡಿತಗೊಳಿಸಿ ಗಿಮಿಕ್ ರಾಜಕೀಯ ಈಗಲೇ ಆರಂಭಿಸಿದೆ. ನಾವು ಇಷ್ಟೊಂದು ಗ್ಯಾರಂಟಿ ನೀಡಿ ಅನುಷ್ಠಾನ ಕೂಡ ಮಾಡಿದ್ದೇವೆ. ಅವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಎಲ್ಲಾ ಬಡ, ಮಧ್ಯಮ ವರ್ಗದವರಿಗೆ ಉಂಚಿತವಾಗಿ ಗ್ಯಾಸ್ ವಿತರಿಸಲಿ, ರೈಲು ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣ ನೀಡಲಿ, ಡಿಸೇಲ್ ದರ ಕಡಿಮೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.