i
ಕರ್ನಾಟಕ ಲೋಕಸೇವ ಆಯೋಗದಿಂದ ಶಿಕ್ಷಕರ ಹೆಚ್ಚುವರಿ ಪಟ್ಟಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವ ಆಯೋಗದ ಅಧಿಸೂಚನೆ ಸಂ. ಇ(1)259/2018-19/ಪಿ.ಎಸ್.ಸಿ ದಿನಾಂಕ: 19-11-2018 ಮತ್ತು ಅಧಿಸೂಚನೆ ಸಂ ಇ(1) 265/2018-19/ಪಿಎಸ್ಸಿ ದಿನಾಂಕ: 22-11-2018ರಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನ ಆಜಾದ್ ಮಾದರಿ ಶಾಲೆಗಳಲ್ಲಿನ ಗ್ರೂಫ್ ‘ಸಿ’ ವೃಂದದ ಸಮಾಜ ವಿಜ್ಞಾನ ಶಿಕ್ಷಕ್ರು (ಆರ್.ಪಿ.ಸಿ 79) ಮತ್ತು ಉರ್ದು ಭಾಷಾ ಶಿಕ್ಷಕರು (ಹೆಚ್.ಕೆ. 21) ಹುದ್ದೆಗಳ ನೇಮಕಾತಿಗೆ ನಿಯಮನುಸಾರ ಶೇಕಡ 10% ರಷ್ಟು ಹೆಚ್ಚುವರಿ ಪಟ್ಟಿಯನ್ನು ಮತ್ತು ಕಟ್ಆಫ್ ಅಂಕಗಳ ಪಟ್ಟಿಯನ್ನು ಆಗಸ್ಟ್ 30 ರಂದು ಆಯೋಗದ ಅಂತರ್ಜಾಲ http://kpsc.kar.nic.in/lists/cutoffmarks ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
ಪ್ರಸ್ತುತ ನೇಮಕಾತಿ ಪ್ರಾಧಿಕಾರವು ಹೆಚ್ಚುವರಿ ಪಟ್ಟಿಗಾಗಿ ಸಲ್ಲಿಸಿರುವ ಬೇಡಿಕೆ ಪತ್ರ / ಪ್ರಸ್ತಾವನೆಗಳಿಗನುಸಾರವಾಗಿ (ನಮೂನೆ – 7) ಹೆಚ್ಚುವರಿ ಆಯ್ಕೆಪಟ್ಟಿಯನ್ನು ನಿಯಮನುಸಾರ ಸಿದ್ದಪಡಿಸಲಾಗುವುದು.
ಆಯೋಗವು ಸದರಿ ಹುದ್ದೆಗಳ ನೇಮಕಾತಿಗೆ ಈಗಾಗಲೇ ಪ್ರಕಟಿಸಲಾದ ಹೆಚ್ಚುವರಿ ಪಟ್ಟಿಯಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಲು ಇಚ್ಚಿಸದ ಅಭ್ಯರ್ಥಿಗಳು ಮಾತ್ರ ಸೆಪ್ಟೆಂಬರ್ 10ರೊಳಗಾಗಿ ಯಾವುದಾದರೊಂದು ಮೂಲಗುರುತಿನ ಚೀಟಿಯೊಂದಿಗೆ “ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು – 560 001 ಇವರ ಸಮ್ಮುಖದಲ್ಲಿ ಖುದ್ದಾಗಿ ಆಹರಾಗಿ ಲಿಖಿತವಾಗಿ ಸ್ವ-ಇಚ್ಚಾ ಹೇಳಿಕೆಯನ್ನು ಸಲ್ಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.