i
ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮ ಗುರು ರಾಷ್ಟ್ರ ಸಂತ ಡಾ.ಸದ್ಗುರುಗಳಿಂದ ಪಾದಯಾತ್ರೆ…
ಚಂದ್ರವಳ್ಳಿ ನ್ಯೂಸ್, ಬೀದರ್:
ಲೋಕ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಆಧ್ಯಾತ್ಮ ಗುರು ರಾಷ್ಟ್ರ ಸಂತ ಡಾ. ಸದ್ಗುರುಗಳು ಮಾಡುತ್ತಿರುವ ಲೋಕ ಕಲ್ಯಾಣ ಕಾರ್ಯಚರಣೆಯಿಂದ ಪ್ರಸಿದ್ದಿ ಹೊಂದಿರುವ ಮತ್ತು ಪವಾಡಗಳಿಂದ ಭಕ್ತರಿಗೆ ಕಾಮಧೇನು ಕಲ್ಪವೃಕ್ಷವಾಗಿ ಇಂದು ಬೀದರ ಭಾಗದಲ್ಲಿ ಹೆಸರು ಮಾಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಹಾಗಾಗಿ ಗುರುಜಿಯವರು ಹೆಜ್ಜೆ ಹಾಕಿದ ದಾರಿ ಪುಣ್ಯಪ್ರದವಾದ ಮಾರ್ಗವಾಗಿ ಪರಿಣಮಿಸಿದ್ದು, ಲಕ್ಷಾಂತರ ಭಕ್ತರ ಬೇಡಿಕೆಗಳನ್ನು ಈಡೇರಿಸಿದೆ. ಭಕ್ತರ ಜೀವನದಲ್ಲಿ ಹೊಸ ಹುರುಪು, ಚೈತನ್ಯವನ್ನು ಕರುಣಿಸುವ ಮಹಾಮಾರ್ಗವಾಗಿದೆ. ಈ ಪವಿತ್ರ ಮಾರ್ಗವು ಪ್ರಾರಂಭವಾಗಿ ಇಂದಿಗೆ ೨೧ ವರ್ಷಗಳು ಕಳೆದಿವೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸದ್ಭಕ್ತರ ಸಮನ್ವಯತೆಯಿಂದಾಗಿ, ಪರಸ್ಪರ ಸಂಪರ್ಕ ಸಾಧಿಸುವ ದಿಶೆಯಲ್ಲಿ ನಿರಂತರ ಹೆಜ್ಜೆಯಾಗಿರುವುದರಿಂದಾಗಿ ಪಾದಯಾತ್ರೆಯು ಈ ವರ್ಷಕ್ಕೆ ೨೨ನೇ ವರ್ಷದ ಇತಿಹಾಸಿಕ ದಾಖಲೆಯಾಗಿದೆ. ಈ ಪವಿತ್ರ ಪಾದಯಾತ್ರೆ ಸದ್ಗುರುಗಳ ಜನ್ಮಸ್ಥಳವಾದ ಸಿರ್ಸಿ ಔರಾದ್ದಿಂದ ಪ್ರಾರಂಭವಾಗಿ ಬಗ್ದಲ್, ಮನ್ನಾಯಖೆಳ್ಳಿ ಮಾರ್ಗವಾಗಿ ಶಂಭುಲಿಂಗೇಶ್ವರ ಆಶ್ರಮ ಸುಕ್ಷೇತ್ರ ರೇಕುಳಗಿಗೆ ತಲುಪುತ್ತದೆ. ಎಂದ ರೇಕುಳಗಿಯ ಸದ್ಭಕ್ತ ಮಂಡಳಿಯ ಪರವಾಗಿ ಗುರುಜಿಯವರು ಅಪ್ತ ಡಾ ವಿಶ್ವನಾಥ ತೇಗಂಪೂರೆ ಹಾಗೂ ದೀಪಕ ಸಲಗರ ಜಂಟಿಯಾಗಿ ಮಾಹಿತಿ ನೀಡಿದರು. ಅವರು ಪತ್ರಿಕೆಯೊಂದಿಗೆ ಮಾತನಾಡಿ ಇದೇ ೨೯-೦೯-೨೦೨೩ರಂದು ಜರುಗುವ ಶ್ರೀ ಶಂಭುಲಿಂಗೇಶ್ವರ ಪಾದಯಾತ್ರೆಯಲ್ಲಿ ಸುಮಾರು ದೇಶದ ೨೧ ರಾಜ್ಯಗಳಿಂದ ಆಗಮಿಸುವ ಅಪಾರ ಭಕ್ತ ಜನಸಾಗರದಲ್ಲಿ ಸುಮಾರು ೫೦ ಸಾವಿರ ಜನರು ಪಾಲ್ಗೊಳ್ಳುವರು. ಸದ್ಗುರುವಿನ ಜೊತೆಗೆ ಪಾದಯಾತ್ರೆಯಲ್ಲಿ ಹೆಜ್ಜೆಹಾಕುವುದರಿಂದ ಕೋಟಿಯಜ್ಞ, ಕೋಟಿ ಜಪ ಮತ್ತು ಪಾದಪೂಜೆ ಮಾಡಿದಷ್ಟು ಫಲಪ್ರಾಪ್ತಿಯಾಗುವುದೆಂದು ಪೂಜ್ಯ ಸದ್ಗುರುಗಳ ಶ್ರೀವಾಣಿಯಾಗಿದೆ. ಎಂದು ಸದ್ಗುರುಗಳ ಮಹಿಮೆಯ ಬಗ್ಗೆ ಕೊಂಡಾಡಿದರು.ಈ ಪಾದಯಾತ್ರೆಯಲ್ಲಿ ಭಾಗಿಯಾಗುವುದರಿಂದ ನಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಿರ್ಗತರಿಕರಿಗೆ ಅಪಾರವಾದ ಸಂಪತ್ತು ಪ್ರಾಪ್ತಿಯಾಗುತ್ತದೆ. ಭಕ್ತರೆಲ್ಲರಿಗೂ ಸುಖ ಶಾಂತಿ ಲಭಿಸುತ್ತದೆ. ದಾರಿಯುದ್ದಕ್ಕೂ ಭಕ್ತರು ’ಜೈ ಶಂಭುಲಿಂಗೇಶ್ವರ ಓಂ ಭರೋ ಶಂಕರ್ ಗುರು ಹರಹರ ಮಹಾದೇವ’ ಎಂದು ಜಯಘೋಷ ಹಾಕುತ್ತ ಹೆಜ್ಜೆ ಹಾಕುತ್ತಾರೆ. ಪದೇಪದೇ ಸದ್ಗುರುಗಳ ದರ್ಶನ ಪಡೆಯುವ ಭಾಗ್ಯ ಲಭಿಸುತ್ತದೆ. ದಾಸೋಹಿಗಳು ಸ್ವಇಚ್ಛೆಯಿಂದ ಪಾದಯಾತ್ರಿಗಳಿಗೆ ಅಂಬಲಿ-ನೀರು-ಪಾನಕ, ಹಣ್ಣುಹಂಪಲು, ತಿಂಡಿತಿನಿಸು, ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನು ವಿತರಿಸುತ್ತಾರೆ. ಬಗ್ದಲ್ ಗ್ರಾಮದ ವ್ಯಾಪ್ತಿಯಲ್ಲಿ ಉಪಾಹಾರ ವ್ಯವಸ್ಥೆ ಇದ್ದಿರುತ್ತದೆ. ರೇಕುಳಗಿಯಲ್ಲಿ ಮಹಾಪ್ರಸಾದ ವಿತರಣೆಯಾಗುತ್ತದೆ. ಪ್ರಸಾದ ವಿತರಕರಲ್ಲಿ, ಸ್ವೀಕರಿಸುವವರಲ್ಲಿ ಯಾವುದೇ ರೀತಿಯ ಭೇದಭಾವ ಇರುವುದಿಲ್ಲ. ಪ್ರಸಾದ ವಿತರಣೆ ಮಾಡುತ್ತಿದ್ದೇನೆಂಬ ಅಹಂಕಾರವಾಗಲಿ, ಸ್ವೀಕರಿಸುತ್ತಿದ್ದೇನೆಂಬ ದೈನತೆಯಾಗಲಿ ಯಾರಲ್ಲೂ ಸುಳಿಯುವುದಿಲ್ಲ. ಹಾಗಾಗಿ ಇದೊಂದು ಅಪರೂಪದ ಪ್ರಸಂಗವಾಗಿದೆ. ಮಹಾಪಾದಯಾತ್ರೆಯಾಗಿದೆ. ಯಾರು ಭಾಗಿಯಾಗುತ್ತಾರೋ ಅವರ ಜೀವನ ಧನ್ಯತೆಯನ್ನು ಹೊಂದುತ್ತಾರೆ. ಪ್ರತಿಯೊಬ್ಬರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ದೀಪಕ ಸಲಗರ ಹಾಗು ವಿಶ್ವನಾಥ ತೇಗಂಪುರ ಭಕ್ತರಿಗೆ ಈ ಮೂಲಕ ಕರೆ ನೀಡಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.ಈ ಪಾದಯಾತ್ರೆಯ ಉತ್ಸಾಹ ನೋಡುವುದೊಂದು ಪರಮ ಸೌಭಾಗ್ಯವಾಗಿದೆ. ಮುಕ್ತಿದಾಯಕನಾಗಿ ಭವರೋಗವೈದ್ಯನಾಗಿರುವಂತಹ ಶಂಭುಲಿಂಗೇಶ್ವರ, ಮಾತೆ ಬಸಮ್ಮ ದಯೆಯಿಂದಾಗಿ ರೋಗದಿಂದ ಬಳಲುತ್ತಿದ್ದ ಭಕ್ತರು ರೋಗಮುಕ್ತರಾಗಿದ್ದಾರೆ. ನಿರ್ಗತಿಕರು ಅಪಾರವಾದ ಸಂಪತ್ತು ಪಡೆಯುತ್ತಾರೆ. ಈ ಪಾದಯಾತ್ರೆಯಲ್ಲಿ ಹಿರಿಯ ಅಧಿಕಾರಿಗಳು, ಉದ್ದಿಮೆದಾರರು, ರಾಜಕಾರಣಿಗಳು, ಭಾಗವಹಿಸುವುದು ವಿಶೇಷ. ಪಾದಯಾತ್ರೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಸದ್ಗುರುಗಳು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಾರೆ. ತಕ್ಷಣ ನೋವು, ಬಳಲಿಕೆ, ಸಮಸ್ಯೆ ಮಾಯವಾಗುವುದನ್ನು ನೋಡಿ ಭಕ್ತರು ಚಪ್ಪಾಳೆ ತಟ್ಟುತ್ತಾ ಜಯಘೋಷ ಹಾಕುತ್ತಾರೆ. ಪಾದಯಾತ್ರೆಯಲ್ಲಿ ಭಕ್ತರು ಪದೇ ಪದೇ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ತಮ್ಮ ಎಲ್ಲಾ ಸಮಸ್ಯೆಯನ್ನು ಸದ್ಗುರುಗಳ ಪಾದಕ್ಕೆ ಅರ್ಪಿಸಿ, ತನ್ಮಯತೆಯಿಂದ ಮುಕ್ತಿ ಪಡೆಯುತ್ತಾರೆ. ಭೂಲೋಕದಲ್ಲಿ ಜರುಗುವ ಇದೊಂದು ಸುಂದರ ಮನಮೋಹಕ ದೃಶ್ಯವಾಗಿದೆ. ಜೀವನದಲ್ಲೊಮ್ಮೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು, ಅದರ ಐಸಿರಿಯನ್ನು ನೋಡುವುದೇ ಒಂದು ಪರಮ ಸೌಭಾಗ್ಯದ ಮಾತಾಗಿದೆ. ಈ ಪಾದಯಾತ್ರೆಯಲ್ಲಿ ಸಾಕ್ಷಾತ್ ಶಿವಸ್ವರೂಪಿಗಳಾದ ತಂದೆ ಶಂಭುಲಿಂಗ ಮಾತೆ ಬಸಮ್ಮ ಮತ್ತು ಡಾ. ಮಂತ್ರಮಹರ್ಷಿ ಸದ್ಗುರುಗಳ ದರ್ಶನವೆಂದರೆ ತ್ರಿಮೂರ್ತಿಗಳ ದರ್ಶನಭಾಗ್ಯ ಪಡೆದಷ್ಟು ಸಂತೋಷವಾಗುತ್ತದೆ. ಮಹಾರಾಷ್ಟ್ರದಿಂದ ಬರುವ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ತಲೆಗೆ ಪೇಟ ಕಟ್ಟಿ ಜಯಘೋಷಗಳನ್ನು ಹಾಕುತ್ತಾರೆ. ಹಾಗಾಗಿ ಇದೊಂದು ವಿಶೇಷ, ಅರ್ಥಪೂರ್ಣವಾದ ಪಾದಯಾತ್ರೆಯಾಗಿದ್ದು, ಎಲ್ಲರೂ ಪಾಲ್ಗೊಂಡು ಕೃತಾರ್ಥರಾಗಲು ಸದ್ಭಕ್ತ ಮಂಡಳಿಯ ಪರವಾಗಿ ಡಾ.ವಿಶ್ವನಾಥ ತೇಗಂಪೂರೆ ದೀಪಕ ಸಲಗರವಿನಂತಿಸಿದ್ದಾರೆ.