i
ಅಧಿಕಾರಿಗಳ ದಾಳಿ, 4.5 ಲಕ್ಷ ಮೌಲ್ಯದ ಗಾಂಜಾ ವಶ…
ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಮೊಳಕಾಲ್ಮೂರು ಅಬಕಾರಿ ಅಧಿಕಾರಿಗಳ ದಾಳಿ ನಡೆಸಿ 4.5 ಲಕ್ಷ ಮೌಲ್ಯದ ಗಾಂಜಾ ವಶ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರ ಬಳಿ ಜರುಗಿದೆ.ಗ್ರಾಮದ ಬೈರಯ್ಯ ಎಂಬಾತನನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು ವಿಚಾರ ಮಾಡಿದ್ದು ಆರೋಪಿ ರೈತನ ಸರ್ವೇ ನಂ. 10/1 ಜಮೀನಿನಲ್ಲಿ ಗಾಂಜಾ ಬೆಳೆದಿದ್ದನು ಎನ್ನಲಾಗಿದೆ. ಸುಮಾರು 89 KG ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಡಿಸಿ ಬಿ.ಮಾದೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.