i
ರಾಜ್ಯದ ಹಲವು ರೈಲುಗಳ ಓಡಾಟ ರದ್ದು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
I. ರೈಲುಗಳ ರದ್ದುಗುಂಟೂರು ವಿಭಾಗದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.
1. ರೈಲು ಸಂಖ್ಯೆ 17329 ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 2 ರಿಂದ ಅಕ್ಟೋಬರ್ 8 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ.2. ರೈಲು ಸಂಖ್ಯೆ 17330 ವಿಜಯವಾಡ-ಎಸ್.ಎಸ್.ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 9 ರವರೆಗೆ ಮತ್ತೆ ರದ್ದುಗೊಳಿಸಲಾಗುತ್ತಿದೆ.II. ರೈಲುಗಳ ಮಾರ್ಗ ಬದಲಾವಣೆ-ವಿಜಯವಾಡ ವಿಭಾಗದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.1. ಅಕ್ಟೋಬರ್ 1, 3 ಮತ್ತು 8 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 12835 ಹಟಿಯಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.2. ಅಕ್ಟೋಬರ್ 6 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 12889 ಟಾಟಾನಗರ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲು ನಿಡದಾವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.
3. ಅಕ್ಟೋಬರ್ 5 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 18111 ಟಾಟಾನಗರ-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ರೈಲು ನಿಡದವೊಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.III. ರೈಲುಗಳ ರದ್ದು/ಮಾರ್ಗ ಬದಲಾವಣೆ-ಚಕ್ರಧರಪುರ ವಿಭಾಗದ ರೂರ್ಕೆಲಾದಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲು ಆಗ್ನೇಯ ರೈಲ್ವೆ ವಲಯವು ಸೂಚಿಸಿದೆ. ರೈಲುಗಳು ರದ್ದು-1. ರೈಲು ಸಂಖ್ಯೆ 12835 ಹಟಿಯಾ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 1 ಮತ್ತು 10 ರಂದು ರದ್ದುಪಡಿಸಲಾಗುತ್ತಿದೆ.2. ರೈಲು ಸಂಖ್ಯೆ 12836 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಹಟಿಯಾ ದ್ವಿ-ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 3, 10 ಮತ್ತು 12 ರಂದು ರದ್ದುಪಡಿಸಲಾಗುತ್ತಿದೆ. 3. ರೈಲು ಸಂಖ್ಯೆ 17321 ವಾಸ್ಕೋ-ಡ-ಗಾಮಾ-ಜಸಿದಿಹ್ ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 13 ರಂದು ರದ್ದುಗೊಳಿಸಲಾಗುತ್ತಿದೆ.
4. ರೈಲು ಸಂಖ್ಯೆ 17322 ಜಸಿದಿಹ್-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಸೂಪರ್ಫಾಸ್ಟ್ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲನ್ನು ಅಕ್ಟೋಬರ್ 16 ರಂದು ರದ್ದುಗೊಳಿಸಲಾಗುತ್ತಿದೆ.ಮಾರ್ಗ ಬದಲಾವಣೆ:1. ಅಕ್ಟೋಬರ್ 13 ರಂದು ಟಾಟಾನಗರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12889 ಟಾಟಾನಗರ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಸೂಪರ್ಫಾಸ್ಟ್ಎಕ್ಸ್ಪ್ರೆಸ್ರೈಲು ರಾಜ್ಖರ್ಸಾವನ್, ಡಂಗೋಪೊಸಿ, ಜರೋಲಿ, ನಯಾಗರ್, ಜಖಾಪುರ ಮತ್ತು ಕಟಕ್ ನಿಲ್ದಾಣಗಳ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.