i
ಭೀಕರ ಅಪಘಾತ, ಇಬ್ಬರು ಬೈಕ್ ಸವಾರರ ಸಾವು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ಇಬ್ಬರು ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಸಮೀಪದ ಹುಳ್ಳಿಕಟ್ಟಿ ಸಮೀಪ ಜರುಗಿದೆ.
ಸೋಮವಾರ ಸಂಜೆ ಇಬ್ಬರು ಬೈಕ್ ಸವಾರರ ಮುಖಾಮುಖಿ ಡಿಕ್ಕಿಯಿಂದಾಗಿ ಚೌಳೂರು ಗೇಟ್ ನಿವಾಸಿ ಅಭಿಷೇಕ್(24) ಸಾವು ಕಂಡಿದ್ದರು. ಮತ್ತೊಬ್ಬ ಬೈಕ್ ಸವಾರ ಜುಂಜಟರಗುಂಟೆ ಜೆ.ಹನುಮಂತರಾಯ(20) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಸಾವು ಕಂಡಿದ್ದಾರೆ. ಹೀಗಾಗಿ ಬೈಕ್ ಅಪಘಾತದಲ್ಲಿ ಸತ್ತವರ ಸಂಖ್ಯೆ ಎರಡಕ್ಕೆ ಏರಿದೆ.
ಬೈಕ್ ಹಿಂಬದಿ ಕೂತಿದ್ದ ಮಹೇಶ್ ಬಾಬು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಶುರಾಂಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.